ರಾಜ್ಯ

ಸಚಿವ ಸಂಪುಟ ವಿಸ್ತರಣೆ; ಕರಾವಳಿಯ ಮೂವರು ಶಾಸಕರುಗಳಿಗೆ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ

0

ಕರ್ನಾಟಕದ ರಾಜಕೀಯದ ಸಂಪುಟದ ವಿಸ್ತರಣೆಯಾಗಿದೆ. ಇದೀಗ ಯಾರಿಗೆ ಸಚಿವ ಸ್ಥಾನ ಎನ್ನುವುದು ಹೊರಬಿದ್ದಿದೆ. ಒಟ್ಟು 29 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ. ಹೈಕಮಾಂಡ್ ಸೂಚನೆ ಮೇರೆಗೆ ಡಿಸಿಎಂ ಹುದ್ದೆ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ಕರಾವಳಿಗೆ 3 ಸಚಿವ ಸ್ಥಾನ :

ನಿರೀಕ್ಷೆಯಂತೆಯೇ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಮೂರು ಬಾರಿ ಕಾರ್ಕಳದಲ್ಲಿ ಶಾಸಕರಾಗಿ ಹೊರಹೊಮ್ಮಿರುವ ಅವರು ವಿಧಾನಪರಿಷತ್ ಮುಖ್ಯಸಚೇತಕರೂ ಆಗಿದ್ದರು. ಜೊತೆಗೆ ಕೋಟ ಶ್ರೀನಿವಾಸ್ ಪೂಜಾರಿ, ಎಸ್. ಅಂಗಾರ ಅವರೂ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸಚಿವರಾಗಿ ಮುಂದುವರೆಯಲಿದ್ದಾರೆ.

Advertisement. Scroll to continue reading.

ಯಾರಿಗೆ ಸಚಿವ ಸ್ಥಾನ :

  • ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ ಶಾಸಕ
  • ಆರ್.ಅಶೋಕ್- ಪದ್ಮನಾಭ ನಗರ ಶಾಸಕ
  • ಬಿ.ಸಿ ಪಾಟೀಲ್ – ಹಿರೇಕೇರೂರು ಶಾಸಕ
  • ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರಂ ಶಾಸಕ
  • ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು ಶಾಸಕ
  • ಉಮೇಶ್ ಕತ್ತಿ- ಹುಕ್ಕೇರಿ ಶಾಸಕ
  • ಎಸ್.ಟಿ.ಸೋಮಶೇಖರ್- ಯಶವಂತಪುರ ಶಾಸಕ
  • ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ ಶಾಸಕ
  • ಭೈರತಿ‌ ಬಸವರಾಜ – ಕೆ ಆರ್ ಪುರಂ ಶಾಸಕ
  • ಮುರುಗೇಶ್ ನಿರಾಣಿ – ಬಿಳಿಗಿ ಶಾಸಕ
  • ಶಿವರಾಂ ಹೆಬ್ಬಾರ್- ಯಲ್ಲಾಪುರ ಶಾಸಕ
  • ಶಶಿಕಲಾ ಜೊಲ್ಲೆ- ನಿಪ್ಪಾಣಿ ಶಾಸಕ
  • ಕೆಸಿ ನಾರಾಯಣ್ ಗೌಡ – ಕೆ‌ಆರ್ ಪೇಟೆ ಶಾಸಕ
  • ಸುನೀಲ್ ಕುಮಾರ್ – ಕಾರ್ಕಳ ಶಾಸಕ
  • ಅರಗ ಜ್ಞಾನೇಂದ್ರ – ತೀರ್ಥಹಳ್ಳಿ ಶಾಸಕ
  • ಗೋವಿಂದ ಕಾರಜೋಳ-ಮುಧೋಳ ಶಾಸಕ
  • ಮುನಿರತ್ನ- ಆರ್ ಆರ್ ನಗರ ಶಾಸಕ
  • ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ
  • ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್ ಶಾಸಕ
  • ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ ಶಾಸಕ
  • ಹಾಲಪ್ಪ ಆಚಾರ್ – ಯಲ್ಬುರ್ಗ ಶಾಸಕ
  • ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ ಶಾಸಕ
  • ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ
  • ಪ್ರಭು ಚೌವ್ಹಾಣ್ – ಔರಾದ್ ಶಾಸಕ
  • ವಿ ಸೋಮಣ್ಣ – ಗೋವಿಂದ್ ರಾಜನಗರ ಶಾಸಕ
  • ಎಸ್ ಅಂಗಾರ – ಸುಳ್ಯ ಶಾಸಕ
  • ಆನಂದ್ ಸಿಂಗ್ – ಹೊಸಪೇಟೆ ಶಾಸಕ
  • ಸಿ ಸಿ‌ ಪಾಟೀಲ್ – ನರಗುಂದ ಶಾಸಕ
  • ಬಿ.ಸಿ.ನಾಗೇಶ್ – ತಿಪಟೂರು ಶಾಸಕ

ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರಲಿರುವಂತ ನೂತನ ಸಚಿವರು ಇಂದು ಮಧ್ಯಾಹ್ನ 2.15ಕ್ಕೆ ರಾಜ ಭವನದ ಗಾಜಿನ ಮನೆಯಲ್ಲಿ ನಡೆಯಲಿರುವಂತ ಸರಳ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಲಿದ್ದಾರೆ.

Click to comment

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com