ಹಿರಿಯಡಕ ವೀರಭದ್ರ ದೇವಸ್ಥಾನಕ್ಕೆ ಸಚಿವ ವಿ.ಸುನಿಲ್ ಕುಮಾರ್ ಭೇಟಿ
Published
0
ಹಿರಿಯಡಕ : ಆಲಡೆ ಕ್ಷೇತ್ರ ಶ್ರೀವೀರಭದ್ರ ದೇವಸ್ಥಾನಕ್ಕೆ ಸಚಿವ ಸುನಿಲ್ ಕುಮಾರ್ ಭೇಟಿ ನೀಡಿ, ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಈ ಸಂದರ್ಭ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಪ್ರಸಾದ ವಿತರಿಸಲಾಯಿತು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪೂರ್ಣಿಮಾ ಸುರೇಶ್, ಪ್ರಿಯಾಂಕ ಸುನಿಲ್ ಕುಮಾರ್, ಕಾಪು ಮಂಡಲ ಅಧ್ಯಕ್ಷ ಅನಿಲ್ ಶೆಟ್ಟಿ, ಉಡುಪಿ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ವಿಜೇತ ಬೆಳ್ಳರ್ಪಾಡಿ, ವಿಹಿಂಪದ ಪ್ರಕಾಶ್ ಪುತ್ರಾನ್ ಮೊದಲಾದವರು ಉಪಸ್ಥಿತರಿದ್ದರು.