ಹೆಬ್ರಿ : ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದ ಹೆಬ್ರಿ ಘಟಕ ಮೊದಲನೇ ವರ್ಷದ ವಾರ್ಷಿಕ ಸಮಾರಂಭ ಹಾಗೂ ಹಿರಿಯ ದೈವ ಚಾಕ್ರಿ ಮಾಡುವವರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ಹೆಬ್ರಿಯ ಅರ್ಧ ನಾರೀಶ್ವರ ದೇವರ ಸನ್ನಿಧಿಯ ಸಭಾಭವನದಲ್ಲಿ ಜರಗಿತು. ಸಚಿವ ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಚಿವನಾದ ಬಳಿಕ ದೈವಾರಾಧನೆ ಒಕ್ಕೂಟದ ಕಾರ್ಯಕ್ರಮ ನನ್ನ ಮೊದಲ ಕಾರ್ಯಕ್ರಮ.ಮುಂದಿನ ದಿನಗಳಲ್ಲಿ ದೈವ ಚಾಕ್ರಿ ವರ್ಗದವರಿಗೆ ಸರ್ಕಾರದಿಂದ ಸವಲತ್ತು ಒದಗಿಸುವ ಯೋಜನೆಯನ್ನು ಕಾರ್ಯ ರೂಪಿಸಲು ಪ್ರಯತ್ನ ಮಾಡುತ್ತೇನೆ ಹಾಗೂ ದೈವಾರಾಧನೆ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಆಕಾಡೆಮಿ ಮಾಡುವ ಕುರಿತು ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಒಕ್ಕೂಟವನ್ನು ಎಲ್ಲರೂ ಸೇರಿ ಬಲಪಡಿಸಿ ಎಂದರು.
ದೈವ ಚಿಂತಕ ಸುಧಾಕರ್ ಡಿ. ಅಮೀನ್ ಮಾತನಾಡಿ, ದೈವಾರಾಧನೆ ಆಚಾರ-ವಿಚಾರ ಉಳಿಸಿ ಹಾಗೂ ಮುಂದಿನ ದಿನಗಳಲ್ಲಿ ನನ್ನಿಂದ ಯಾವುದೇ ಸಮಯದಲ್ಲಿ ಒಕ್ಕೂಟಕ್ಕೆ ಸಹಾಯಾಸ್ತಬೇಕಿದ್ದರೆ ನಿಮ್ಮೊಂದಿಗೆ ಸದಾ ಬೆಂಬಲವಾಗಿ ನಾನಿರುತ್ತೇನೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ರಿ ಗ್ರಾಮ ಪಂಚಾಯತ್ ಪಂಚಾಯತ್ ಅಧ್ಯಕ್ಷತೆ ಮಾಲತಿ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಪಾಣಾರ ಆರ್ಡಿ ಉಡುಪಿ ಅವರನ್ನು ಸನ್ಮಾನಿಸಲಾಯಿತು. ಹೆಬ್ರಿ ಘಟಕದ 20 ಮಂದಿ ಹಿರಿಯ ದೈವ ಚಾಕ್ರಿ ವರ್ಗದವರಿಗೆ ಧನ ಸಹಾಯದೊಂದಿಗೆ, ಗೌರವಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕರಾದ ಪ್ರಸನ್ನಕುಮಾರ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಅಶೋಕ್ ಶೆಟ್ಟಿ ಮಾಳ, ಶೇಖರ ಬಂಗೇರ, ಶ್ರೀಧರ ಪೂಜಾರಿ ಬೈಕಾಡಿ, ನರಸಿಂಹ ಪರವ ಮೊದಲಾದವರು ಉಪಸ್ಥಿತರಿದ್ದರು.
ಹೆಬ್ರಿ ಘಟಕದ ಅಧ್ಯಕ್ಷ ಸುಕುಮಾರ್ ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಅರುಣ್ ಪೂಜಾರಿ ವಂದಿಸಿದರು.
Advertisement. Scroll to continue reading.