ಕರಾವಳಿ

ಬ್ರಹ್ಮಾವರ : ಮುಚ್ಚಿದ ಶಾಲೆಗಳು ಮತದಾನ ಕೇಂದ್ರಗಳು; ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವ ಸಿಬ್ಬಂದಿಗಳು

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಸ್ವಾತಂತ್ರ್ಯ ನಂತರ ಚುನಾವಣಾ ಆಯೋಗಕ್ಕೆ ಟಿ. ಶೇಷನ್ ಎನ್ನುವ ವ್ಯಕ್ತಿ ಬಂದು ಚುನಾವಣೆಯ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಿ ಬಹತೇಕ ಬದಲಾವಣೆ ಮಾಡಿ ಜನರ ನೆನಪಿನಲ್ಲಿ ಉಳಿದಿದ್ದಾರೆ. ಆದರೆ ಚುನಾವಣೆ ನಡೆಯುವ ಮತದಾನ ಕೇಂದ್ರಗಳು ಮತಗಟ್ಟೆಗಳು ಮಾತ್ರ ಇನ್ನೂ ಕೂಡಾ ಬದಲಾಗಿಲ್ಲ. ಬಹುಕಾಲದಿಂದ ಊರಿನ ಶಾಲೆಯೇ ಮತಗಟ್ಟೆಯಾಗಿದ್ದು ಅದೆಷ್ಟೋ ಲೋಕಸಭೆ, ವಿಧಾನ ಸಭೆ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಚುನಾವಣೆ ನಡೆದು ಪಾರ್ಲಿಮೆಂಟ್ ಸೇರಿದಂತೆ ಮಿನಿ ವಿಧಾನಸೌಧ, ಗ್ರಾಮ ಪಂಚಾಯತಿ ಹೊಸ ಕಟ್ಟಡಗಳು ರಚನೆಗೊಂಡಿದೆ. ಆದರೆ ಈ ದೇಶದಲ್ಲಿ ಮತಗಟ್ಟೆಗಳು ಮಾತ್ರ ಇನ್ನೂ ಸುಧಾರಿಸಿಲ್ಲ.

ಮುಚ್ಚಿದ ಶಾಲೆಗಳಲ್ಲಿ ಮತಗಟ್ಟೆ ಕೇಂದ್ರ:

ಬ್ರಹ್ಮಾವರ ಭಾಗದಲ್ಲಿ ಹಲವಾರು ಶಾಲೆಗಳು ವಿದ್ಯಾರ್ಥಿಗಳು ಇಲ್ಲದೆ ಮುಚ್ಚಿದೆ.
ಚುನಾವಣಾ ಸಮಯದಲ್ಲಿ ಮಾತ್ರ ಬಾಗಿಲು ತೆಗೆಯುವ ಶಾಲೆಯಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಗೆ ಬಂದ ಚುನಾವಣಾ ಅಧಿಕಾರಿಗಳು, ಮಹಿಳಾ ಸಿಬ್ಬಂದಿಗಳು , ಪೊಲೀಸ್ ಸೇರಿದಂತೆ ರಾತ್ರಿ ಭಾರೀ ಅತಂಕದಿಂದ ಕಾಲ ಕಳೆದ ವಿದ್ಯಮಾನ ಹಲವಾರು ಮತದಾನ ಕೇಂದ್ರದಲ್ಲಿ ನಡೆದಿದೆ. ಬ್ರಹ್ಮಾವರ ಬಳಿಯ ಬೈಕಾಡಿಯ ಸರಕಾರಿ ಶಾಲೆ ನೂರಾರು ವರ್ಷದ ಸನಿಹ ಇರುವ ಈ ಶಾಲೆಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆದವರಿದ್ದಾರೆ. ಇದೀಗ ವಿದ್ಯಾರ್ಥಿಗಳು ಇಲ್ಲದ ಕಾರಣ ಬಂದ್ ಆಗಿದೆ.
ಆದರೆ ಚುನಾವಣೆಗೆ ಮಾತ್ರ ಇಂದಿಗೂ ಬಳಕೆ ಆಗುತ್ತಿದೆ. ಈ ಶಾಲೆ ಇದೀಗ ಮುಚ್ಚಿ 2 ವರ್ಷ ಕಳೆದಿದೆ
ಶಾಲೆಯ ಸುತ್ತಲೂ ಗಿಡ ಗಂಟಿಗಳು ಬೆಳೆದು ಒಳಗಡೆ ಧೂಳು ಮಯವಾಗಿದ್ದು ಸ್ವಚ್ಛ ಮಾಡಲು ಕೆಲವು ದಿನಗಳು ಬೇಕು. ಇಲ್ಲಿ 4 ಮತಗಟ್ಟೆ ಇದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಗೆ 30 ಮಂದಿ ಸಿಬ್ಬಂದಿಗಳೊಂದಿಗೆ ಬಂದಾಗ ಮಾನವರ ಮೂಲ ಭೂತ ಅವಶ್ಯಕತೆಗೆ ಕೂಡಾ ಕಷ್ಟ ಪಡಬೇಕಾದ ಸ್ಥಿತಿ ಇಲ್ಲಿತ್ತು.

Advertisement. Scroll to continue reading.

ಕೇವಲ ಒಂದು ಶೌಚ ಗ್ರಹ ವಿದ್ಯುತ್ ನೀರು ಬೆಳಕು ಆಸನ ಎಲ್ಲವೂ ಕೂಡಾ ಅಸ್ತವ್ಯಸ್ಥ.
ಶಾಲೆಯ ಬಂದು ಭಾಗದಲ್ಲಿ ತೆರೆದ ಗೋಡೆ ಬೀಳುವ ಸ್ಥಿತಿಯಲ್ಲಿದೆ. ಅಧಿಕಾರಿಗಳಿಗೆ ಶಾಲೆಯ ಒಳಗಡೆ ಫ್ಯಾನ್ ಬೆಳಕು ಎಲ್ಲವೂ ಶಾಮಿಯಾನದವರಿಂದ ಮಾಡಿಸಿ ಚುನಾವಣೆ ಮುಗಿದಿದೆ.
ಸುತ್ತಲೂ ಗದ್ದೆಗಳ ನಡುವೆ ಇರುವ ಹಂದಾಡಿ ಪ್ರಾಥಮಿಕ ಶಾಲಾ ಮತದಾನ ಕೇಂದ್ರ ಕೂಡಾ ಇದೇ ಸ್ಥಿತಿಯಲ್ಲಿದೆ.
ಬ್ರಹ್ಮಾವರ ನಗರ ಮಧ್ಯ ಭಾಗದ ರಥ ಬೀದಿಯಲ್ಲಿರುವ ಅಂಗನವಾಡಿ ಮತಗಟ್ಟೆಯ ಹಳೆ ಕಟ್ಟಡ .ಇದು ಕೇವಲ 10/ 30 ಅಡಿಯ ಜಾಗದಲ್ಲಿದೆ .
ಇಲ್ಲಿನ 970 ಮತದಾರರು ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮತದಾನ ಮಾಡಲು ಅಸಾದ್ಯ. 100 ಮೀಟರ್ ದೂರದಲ್ಲಿ ವಾಹನ ನಿಲುಗಡೆ ಮಾಡಲು ಜಾಗವೇ ಇಲ್ಲ . ಇದು ನಗರ ಮಧ್ಯ ಆಭಾಗದಲ್ಲಿನ ಮತ ಗಟ್ಟೆ ಯಾದರೆ ಇನ್ನು ನಕ್ಷಲ್ ಪೀಡಿತ ಪ್ರದೇಶ. ಇನ್ನಿತರ ಭಾಗದ ಮತಗಟ್ಟೆಗಳು ಹೇಗಿರ ಬಹುದು ಎಂದು ಊಹಿಸಲೂ ಅಸಾದ್ಯ.

ಆದರೂ ಆಗಾಗ ಬರುವ ಚುನಾವಣೆಗಳು ಸರಕಾರಿ ಅಧಿಕಾರಿಗಳಿಗೆ ,ಸಿಬ್ಬಂದಿಗಳಿಗೆ ಮತಗಟ್ಟೆಯಲ್ಲಿ ಒಂದು ರಾತ್ರಿ ಕಳೆದು ಬೆಳಿಗ್ಗೆ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಇಂತಹ ಅವ್ಯವಸ್ಥೆಗೆ ಅಧಿಕಾರಿಗಳು ಸರಕಾರದ ವಿರುದ್ಧ ಮಾತನಾಡುವಂತಿಲ್ಲ .
ಹಲವಾರು ಅವ್ಯವಸ್ಥೆಯ ಕುರಿತು ಪ್ರತಿಭಟನೆ ಮಾಡುವ ಸಮಾಜ ಸೇವಕರಿಗೆ , ಚುನಾಯಿತ ಜನಪ್ರತಿನಿಧಿಗಳಿಗೆ ಇದು ಬೇಕಾಗಿಲ್ಲ.
ಒಟ್ಟಾರೆಯಾಗಿ ಮುಂದಿನ ದಿನದಲ್ಲಿ ಬರುವ ಚುನಾವಣೆಗೆ ಸೂಕ್ತ ಮೂಲ ಭೂತ ಅವಷ್ಯ ಕಥೆ ಇರುವಂತೆ ಮತಗಟ್ಟೆಗಳನ್ನು ಮಾಡಿ ಸಂಬಂಧಪಟ್ಟ ಇಲಾಖೆ ಹೊಸ ಆಯಾಮ ನೀಡ ಬೇಕಾಗಿದೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com