ಕರಾವಳಿ

ಕೇಂದ್ರ ಸಚಿವ ಭೂಪೇಂದ್ರ ಯಾದವ್ ರನ್ನು ಭೇಟಿ ಮಾಡಿದ ಸಂಸದ ಬಿ.ವೈ.ರಾಘವೇಂದ್ರ; ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ವನ್ಯಜೀವಿ ಪ್ರಾಣಿ ರಕ್ಷಣಾ ಕೇಂದ್ರ ಸ್ಥಾಪಿಸಲು ಮನವಿ

0

ವರದಿ : ದಿನೇಶ್ ರಾಯಪ್ಪನಮಠ

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿರುವ ಮೂಕಾಂಬಿಕಾ ವನ್ಯಜೀವಿ ವನ್ಯ ಜೀವಿ ಅಭಯಾರಣ್ಯದಲ್ಲಿ ವನ್ಯ ಜೀವಿ ಸಂರಕ್ಷಣಾ ಕೇಂದ್ರ ಸಹಿತ ಮೂಕಾಂಬಿಕಾ ಪ್ರಾಣಿ ಶಾಸ್ತ್ರೀಯ ಉದ್ಯಾನವನ ಸ್ಥಾಪನೆ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮೂಕಾಂಬಿಕಾ ಅಭಯಾರಣ್ಯವು ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಸೇರಿ 370 ಚ.ಕಿ.ಮೀ ಪಶ್ಚಿಮ ಕರಾವಳಿ ಅರೆ ಉಷ್ಣಾಂಶವಲಯ ಹಾಗೂ ಉಷ್ಣ ವಲಯ ನಿತ್ಯ ಹರದ್ವರ್ಣ ಪ್ರದೇಶ ವಾಗಿದೆ. ಮೂಕಾಂಬಿಕಾ ಅಭಯಾರಣ್ಯದಲ್ಲಿ ಚಿರತೆ, ಕರಡಿ, ಕಾಡುಕೋಣ, ಕೆನ್ನಾಯಿ, ಗುಳ್ಳೆನರಿ, ಕಡವೆ, ಸಾರಂಗ ಹಾಗೂ ಇನ್ನಿತರೆ ರಾಣಿ ಸಂಕುಲಗಳು, ಜಂಗಲ್ ಮೈನಾ, ಬಿಳಿ ಹಾಗೂ ಕೆಂಪು ಬುಲ್ ಬುಲ್, ಮಂಗಟ್ಟೆ ಇನ್ನಿತರೆ ಹಕ್ಕಿಗಳು ನೆಲೆಸಿವೆ. ಪ್ರಾಣಿಗಳ ಸಂಘರ್ಷದಲ್ಲಿ, ಅಪಘಾತದಲ್ಲಿ ಹಾಗೂ ಮಾನವ – ಪ್ರಾಣಿ ಸಂಘರ್ಷಗಳಲ್ಲಿ ಗಾಯಗೊಂಡ ಪ್ರಾಣಿ-ಪಕ್ಷಿಗಳನ್ನು ರಕ್ಷಣೆ ಮಾಡಿ ಆರೈಕೆ ಮಾಡಲು ಹತ್ತಿರದಲ್ಲಿಯಾಔಉದೇ ವ್ಯವಸ್ಥೆಗಳು ಇರುವುದಿಲ್ಲ. ಹತ್ತಿರದ ಅಡಿಕೆ ತೋಟ ಕೃಷಿ ಬೆಳೆಗಳು ಕಾಡು ಪ್ರಾಣಿಗಳಿಂದ ನಾಶವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ ಬೈಂದೂರ್ ವಿಧಾನ ಸಭಾ ಕ್ಷೇತ್ರ ದಲ್ಲಿರುವ ವನ್ಯ ಜೀವಿ ರಕ್ಷಣಾ ಕೇಂದ್ರ ಸಹಿತ ಮೂಕಾಂಬಿಕಾ ಪ್ರಾಣಿ ಶಾಸ್ತ್ರೀಯ ಉದ್ಯಾನವನ ಸ್ಥಾಪನೆ ಮಾಡುವಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಹವಾಮಾನ ಬದಲಾವಣೆ ಮತ್ತು ಕೇಂದ್ರ ಅರಣ್ಯ,ಪರಿಸರ ಸಚಿವರಾದ ಭೂಪೆಂದ್ರ ಯಾದವ್ ಅವರಿಗೆ ಮನವಿ ಸಲ್ಲಿಸಿದರು.

Advertisement. Scroll to continue reading.

ಕಟ್ಟಿನ ಹೊಳೆಯಿಂದ ಕೊಡಚಾದ್ರಿವರೆಗೆ ಕಾಂಕ್ರೀಟ್ ರಸ್ತೆ:

ಕಾರ್ಕಳ ವನ್ಯ ಜೀವಿ ವಲಯದ ಕಟ್ಟಿನ ಹೊಳೆಯಿಂದ ಕೊಡಚಾದ್ರಿವರೆಗೆ ಮಣ್ಣಿನ ರಸ್ತೆಯನ್ನೂ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಬೇಕಾಗಿ ವಿನಂತಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಭೂಪೇಂದ್ರ ಯಾದವ್ ಈ ವಿಷಯವನ್ನು ಸಕಾರಾತ್ಮಕ ಬಾಗಿ ಪರಿಗಣಿಸುದಾಗಿ ಭರವಸೆ ನೀಡಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com