ಕುಂದಾಪುರ : ಉಭಯ ಜಿಲ್ಲೆಗಳ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆಗ್ರಹ; ಹಿಂ.ಜಾ.ವೇ ವತಿಯಿಂದ ಪ್ರತಿಭಟನೆ
Published
0
ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸಕ್ರಿಯವಾಗಿ ನಡೆಯುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿ ಹಿಂ.ಜಾ ವೇ ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ನೀಡಿದರು.
ಮಂಗಳವಾರ ನಡೆದ ಪ್ರತಿಭಟನೆಯ ಬಳಿಕ ನೀಡಿದ ಮನವಿಯಲ್ಲಿ, ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ನಡೆಸಿ ಭಯೋತ್ಪಾದಕ ಚಟುವಟಿಕೆಗೆ ಬಳಸುತ್ತಿದ್ದಾರೆ. ಆದರೆ ಮುಸಲ್ಮಾನರ ಮದುವೆಯಾದ ಹಿಂದೂ ಹೆಣ್ಣು ಮಕ್ಕಳ ಸದ್ಯದ ಸ್ಥಿತಿಗೆ ಹೇಗಿದೆ ಎಂದು ತನಿಖೆ ಮಾಡಬೇಕು. ಭಯೋತ್ಪಾದಕ ಚಟುವಟಿಕೆಗೆ ಹಣ ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಹಚ್ಚಬೇಕು. ಮಂಗಳೂರಿನಲ್ಲಿ ಎನ್. ಐ.ಎ ಕಚೇರಿ ತೆರೆಯಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
Advertisement. Scroll to continue reading.
ಈ ಸಂದರ್ಭದಲ್ಲಿ ಹಿಂ.ಜಾ.ವೇ ಯ ಕುಂದಾಪುರ ತಾಲೂಕು ಕಾರ್ಯದರ್ಶಿ ಕಿರಣ್, ಕೋಟೆಶ್ವರದ ವಲಯ ಪ್ರ.ಕಾರ್ಯದರ್ಶಿ ಆದರ್ಶ್, ತಾಲೂಕು ಕಾರ್ಯಕಾರಿಣಿ ಕಿರಣ್ ತಲ್ಲೂರು, ಸಂಪರ್ಕ ಪ್ರಮುಖ ರಾಕೇಶ್, ಸಾತ್ವಿಕ್ ಹಾಗೂ ಸುಶಾಂತ್ ಉಪಸ್ಥಿತರಿದ್ದರು.