ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಹೆಬ್ರಿ ಪೇಟೆಯ ಮೂಲಕವೇ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಹೆಬ್ರಿ ತಾಲ್ಲೂಕು ಘಟಕ ಅಧ್ಯಕ್ಷ ವಿಜೇಂದ್ರ ಶೆಟ್ಟಿ ನೇತೃತ್ವದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ಪೇಟೆಯಲ್ಲಿ ನಿರ್ಮಾಣವಾದರೆ ಹೆಬ್ರಿಯ ಸಮಗ್ರ ಅಭಿವದ್ಧಿಗೆ ಪೂರಕವಾಗುತ್ತದೆ ಪೇಟೆಯ ಬದಲು ಬೈಪಾಸ್ ನಿರ್ಮಿಸಲು ಒತ್ತಡಗಳಿದ್ದರೂ ನಿಗದಿತ ನಕ್ಷೆಯಂತೆ ಹೆಬ್ರಿಯ ಪೇಟೆಯಲ್ಲಿ ನಿರ್ಮಿಸುವಂತೆ ವಿಜೇಂದ್ರ ಶೆಟ್ಟಿ ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಸಿ.ಎಂ ಪ್ರಸನ್ನ ಕುಮಾರ ಶೆಟ್ಟಿ, ಹೆಬ್ರಿ ಘಟಕದ ನಿತೀಶ್ ಎಸ್ಪಿ ಉಪಸ್ಥಿತರಿದ್ದರು.
Advertisement. Scroll to continue reading.