ವರದಿ : ದಿನೇಶ್ ರಾಯಪ್ಪನಮಠ
ಕೋಟ: ಜನತಾ ಪೀಶ್ ಮೀಲ್ ಮತ್ತು ಆಯಿಲ್ ಪ್ರಾಡಕ್ಟ್ಸ್ ಸಂಸ್ಥೆಯ ಆವರಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ ಕುಂದರ್ ಮತ್ತು ರಕ್ಷಿತ್ ಕುಂದರ್ ಅವರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕರೋನಾ ಸಮಯದಲ್ಲಿ ಮುನ್ನಲೆಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವ ಕೋಟ ಸಮುದಾಯ ಅರೋಗ್ಯ ಕೇಂದ್ರದ 15 ಮಂದಿ ಆಶಾ ಕಾರ್ಯಕರ್ತೆಯರನ್ನು ಸಂಸ್ಥೆಯ ಮುಖ್ಯಸ್ಥರಾದ ಆನಂದ್ ಸಿ ಕುಂದರ್ ಅವರ ಆಶಯದಂತೆ ಸಂಸ್ಥೆಯ ನಿರ್ದೇಶಕರುಗಳಾದ ಪ್ರಶಾಂತ ಕುಂದರ್ ಮತ್ತು ರಕ್ಷಿತ್ ಕುಂದರ್ ಸನ್ಮಾನಿಸಿದರು. ಪ್ರಶಾಂತ್ ಕುಂದರ್ ಅವರು ಆಶಾ ಕಾರ್ಯಕರ್ತೆಯರ ಸೇವೆಯನ್ನು ಮುಕ್ತಕಂಟದಿಂದ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಅಶೋಕ್ ಕುಂದರ್, ರಚನಾ ಕುಂದರ್, ದಿವ್ಯಲಕ್ಮೀ ಪ್ರಶಾಂತ್ ಕುಂದರ್ ಭಾಗವಹಿಸಿದ್ದರು ಮತ್ತು ಸಿ ಇ ಓ ಡಾ. ಧಾನೇಶ್ ಜಿವಾನಿ, ಸಿ ಎಪ್ ಓ ಅಶ್ವಥ ಕುಮಾರ್ ಶೆಟ್ಟಿ ಮತ್ತು ಜನತಾ ಸಂಸ್ಥೆಯ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು. ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀನಿವಾಸ ಅವರು ಪ್ರಸ್ತಾವಿಕ ಮಾತನಾಡಿದರು. ಸಂಸ್ಥೆಯ ಸಿಬ್ಬಂದಿ ಪ್ರಸನ್ನ ಕಾರ್ಯಕ್ರಮವನ್ನು ನಿರೂಪಿಸಿದರು
Advertisement. Scroll to continue reading.