ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕೋಟ ಶ್ರೀ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ವಿವಿದ್ದೋದ್ಧೇಶ ಸಹಕಾರಿ ಸಂಘದ ವತಿಯಿಂದ 8ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಕೋಟ ನಾರಾಯಣ ಗುರು ಮಂದಿರಲ್ಲಿ ನಡೆಯಿತು. ಹೆಜಮಾಡಿ ಮಹೇಶ್ ಶಾಂತಿ ತಂಡದವರಿಂದ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೆರಿತು. ಸಂಘದ ಅಧ್ಯಕ್ಷೆ ಸುಧಾ ಎ ಪೂಜಾರಿ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರಗಿತು. ಶ್ರೀ ಗುರುಗಳಾದ ಬ್ರಹ್ಮಶ್ರೀ ನಾರಾಯಣಗುರು ಮೂರ್ತಿಗೆ ಅಭಿಷೇಕ, ಶ್ರೀವರಮಹಾಲಕ್ಷ್ಮೀ ದೇವಿಗೆ ಅರ್ಚನೆ ನಡೆಯಿತು.
ಈ ಸಂದರ್ಭದಲ್ಲಿ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಸದಾನಂದ ಪೂಜಾರಿ, ಸಹಕಾರಿ ಸಂಘದ ಕಾರ್ಯದರ್ಶಿ ಸ್ಮಿತಾ ರಾಘವೇಂದ್ರ ಪೂಜಾರಿ, ಸಂಘದ ನಿರ್ದೇಶಕ ರಾಧ ಎಸ್ ಪೂಜಾರಿ,ಸುಶೀಲ ಬಿಲ್ಲವ,ಗೀತಾ ಪೂಜಾರಿ,ಸೋಮು ಪೂಜಾರಿ,ಸರೋಜ ಪೂಜಾರಿ,ಪೂರ್ಣಿಮಾ ಪೂಜಾರಿ, ಪ್ರೇಮ ಪೂಜಾರಿ, ಗುಲಾಬಿ ಪೂಜಾರಿ ಕಂಬಳಗದ್ದೆ, ಗುಲಾಬಿ ಪೂಜಾರಿ ಹರ್ತಟ್ಟು, ಸಿಬ್ಬಂದಿ ಆಶಾ ಪೂಜಾರಿ ಉಪಸ್ಥಿತರಿದ್ದರು.
Advertisement. Scroll to continue reading.