ವರದಿ : ದಿನೇಶ್ ರಾಯಪ್ಪನಮಠ
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಬಿ ಸಿ ಟ್ರಸ್ಟ್ ಬ್ರಹ್ಮಾವರ ತಾಲ್ಲೂಕು ಪಾಂಡೇಶ್ವರ ವಲಯದ ಗುಂಡ್ಮಿ ಕಾರ್ಯಕ್ಷೇತ್ರದ ಶ್ರೀ ಮಹಾವಿಷ್ಣು ವೈದಿಕ ಮಂದಿರ ಭಟ್ಟಮಾಣಿ ಶಂಕರನಾರಾಯಣ ದೇವಸ್ಥಾನಕ್ಕೆ ಪೂಜ್ಯರು ನೀಡಿರುವ 500000/- ಮೊತ್ತವನ್ನು ಕರಾವಳಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ ವಿತರಣೆ ಮಾಡಿ ಶುಭ ಹಾರೈಸಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಯ ಹಿರಿಯ ನಿರ್ದೇಶಕ ಗಣೇಶ.ಬಿ.ಸರ್, ಬ್ರಹ್ಮಾವರ ತಾಲ್ಲೂಕಿನ ಯೋಜನಾಧಿಕಾರಿ ದಿನೇಶ್ ಶೇರುಗಾರ, ತಾಲ್ಲೂಕು ಜನ ಜಾಗ್ರತಿ ವೇದಿಕೆ ಅಧ್ಯಕ್ಷ ಅಚ್ಚುತ ಪೂಜಾರಿ, ಶ್ರೀ ಮಹಾವಿಷ್ಣು ವೈದಿಕ ಮಂದಿರದ ಗೌರವಾಧ್ಯಕ್ಷ ಚಂದ್ರಶೇಖರ ಉಪಧ್ಯಾಯ, ಅಧ್ಯಕ್ಷ ಶಿವಾನಂದ ಮಯ್ಯ, ಕಾರ್ಯದರ್ಶಿ ರಾಮಚಂದ್ರ ಐತಾಳ, ಗುಂಡ್ಮಿ ಒಕ್ಕೂಟದ ಅಧ್ಯಕ್ಷ ಕನಕ ಹಾಗೂ ಪದಾಧಿಕಾರಿಗಳು, ಪಾಂಡೇಶ್ವರ ವಲಯದ ಮೇಲ್ವಿಚಾರಕ ನಾಗೇಂದ್ರ.ಎಸ್, ಸೇವಾಪ್ರತಿನಿಧಿ ಶ್ರೀದೇವಿ, ಯಕ್ಷಿಮಠ, ಗುಂಡ್ಮಿ ಸೇವಾಪ್ರತಿನಿಧಿ ಶಶಿಕಲಾ ಉಪಸ್ಥಿತರಿದ್ದರು.
Advertisement. Scroll to continue reading.