ಕರಾವಳಿ

ಉಡುಪಿ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘದಿಂದ ಧನಸಹಾಯ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಉಡುಪಿ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ ಇವರ ವತಿಯಿಂದ ಅನಾರೋಗ್ಯದಿಂದಿರುವ ಸಂಘದ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಧನಸಹಾಯ ವಿತರಿಸಲಾಯಿತು. ತಲಾ 5000ದಂತೆ ಸುರೇಂದ್ರ ಉಪ್ಪಿನಕೋಟೆ, ಅಶೋಕ್ ಪೂಜಾರಿ ಆಕಾಶವಾಣಿ ಚಂದ್ರಕಾಂತ್ ದೇವಾಡಿಗ ಬ್ರಹ್ಮಾವರ ಮತ್ತು ಚಂದ್ರನಾಯ್ಕ ಶಿರೂರು ಮೂರುಕೈ ಮತ್ತು ಕರೋನ ದಿಂದ ಮೃತಪಟ್ಟ ಕೋಟ ಸ್ಟ್ಯಾಂಡ್ ವಿಜಯ ಮರಕಾಲ ಇವರ ಪತ್ನಿ ಶಾರದ ಮೊಗವೀರ ಇವರಿಗೆ 7000 ಸಹಾಯಧನ ನೀಡಲಾಯಿತು. ಹಾಗೂ ಸಿಐಟಿಯುನ ಮುಖಂಡರಾದ ವಿಠಲ ಪೂಜಾರಿಯವರ ಪತ್ನಿ ಪ್ರೇಮ ಪೂಜಾರಿಯವರಿಗೆ 10000 ಸಹಾಯಧನ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಜು ಸಾಲಿಯಾನ್ ಉಪ್ಪಿನಕೋಟೆ, ಕಾರ್ಯದರ್ಶಿ ಅರವಿಂದ ದೇವಾಡಿಗ ಬ್ರಹ್ಮಾವರ, ಖಜಾಂಚಿ ಶಂಕರ ಮರಕಾಲ ಉಪ್ಪಿನಕೋಟೆ, ಉಪಾಧ್ಯಕ್ಷ H. ಸದಾಶಿವ ಪೂಜಾರಿ ಹಂದಾಡಿ, ಗೌರವ ಅಧ್ಯಕ್ಷ ರಾಜು ಪೂಜಾರಿ, ಹಂದಾಡಿ ರೈತ ಸಂಘದ ಮುಖಂಡ ಗೋಡ್ವಿನ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com