ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಹಂದಾಡಿ ಗ್ರಾಮದ ಮಟಪಾಡಿ ಬಲ್ಜಿಯ ಕೊರಗ ಕಾಲನಿ ಮಕ್ಕಳಿಗೆ ವಿಶೇಷ ತರಗತಿ ವರದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳವಾರ ಉಡುಪಿ ಶಾಸಕ ಕೆ ರಘುಪತಿ ಭಟ್ ಕಾಲೋನಿಗೆ ಭೇಟಿ ನೀಡಿ ಇಲ್ಲಿನ ಅನೇಕ ಪ್ರಗತಿಯ ಕುರಿತು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತು ಇಲ್ಲಿ ನಿರ್ಮಾಣ ಹಂತದಲ್ಲಿರುವ ಕೊರಗ ಸಮುದಾಯ ಭವನಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು. ಶೌಚಾಲಕ್ಕೆ ಮತ್ತು ಸ್ನಾನಗ್ರಹಕ್ಕೆ ಅನುದಾನದ ಸಿಗದ ಕುರಿತು ವರದಿಯಲ್ಲಿ ನೀಡಿದ ಮಾಹಿತಿಗೆ ಸ್ಪಂದಿಸಿದ ಶಾಸಕರು ಅನುದಾನ ಕೊಡಿಸುವುದಾಗಿ ಹೇಳಿದರು. ಇಲ್ಲಿನ ವಿದ್ಯಾರ್ಥಿ ಓರ್ವನು ಶಿಕ್ಷಣ ಮುಂದುವರಿಸಲು ಅನಾಸಕ್ತಿ ತೋರಿದ ಹಿನ್ನೆಲೆಯಲ್ಲಿ ಶಿಕ್ಷಣ ಮುಂದುವರಿಸುವಂತೆ ಶಾಸಕರು ಮನವೊಲಿಸಿದರು.
ಈ ಸಂದರ್ಭ ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ, ಉಪಾಧ್ಯಕ್ಷೆ ಶೋಭಾ ಪೂಜಾರಿ, ಬ್ರಹ್ಮಾವರ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಸುಧೀರ್ ಶೆಟ್ಟಿ, ಪ್ರಮುಖರಾದ ಪಂಚಮಿ ಮೋಹನ್ ಶೆಟ್ಟಿ, ಗುತ್ತಿಗೆದಾರ ಎಸ್. ನಾರಾಯಣ್, ಕೊರಗ ಮುಖಂಡರಾದ ಗಣೇಶ್, ಗಣೇಶ್ ಬಾರ್ಕೂರು ಉಪಸ್ಥಿತರಿದ್ದರು.
Advertisement. Scroll to continue reading.