ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬಾರಕೂರು ಶಾಖೆ ಮತ್ತು ನಬಾರ್ಡ ಸಹಯೋಗದೊಂದಿಗೆ ಜನ ಸಂಪರ್ಕ ಸಭೆ ಮತ್ತು ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ ಬಾರಕೂರು ಶಾಖೆಯಲ್ಲಿ ಜರುಗಿತು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಮಹಾಪ್ರಭಂದಕ ಕರುಣಾಕರ ದಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಬ್ರಹ್ಮಾವರ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವರದರಾಜ್.ಎಸ್.ಶೆಟ್ಟಿ , ಆರ್ಥಿಕ ಸಾಕ್ಷರತೆ, ದೀರ್ಘಕಾಲದ ಬಂಡವಾಳ ಹೂಡಿಕೆ ಮತ್ತು ಹೊಸ ಹೊಸ ಆರ್ಥಿಕ ಸಂಸ್ಥೆಯಲ್ಲಿ ಅಧಿಕ ಬಡ್ಡಿಯ ಆಮಿಷದಿಂದ ಠೇವಣಿ ಇರಿಸುವಾಗ ಜಾಗ್ರತೆ ವಹಿಸಬೇಕಾದ ಕ್ರಮ, ಉಳಿತಾಯ ಖಾತೆ, ವಿಮೆ, ಸ್ವಸಾಹಾಯ ಸಂಘದ ವಿವಿಧ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಬಾರಕೂರು ವ್ಯ.ಸೇ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಉಪಸ್ಥಿತರಿದ್ದರು. ಬಾರಕೂರು ಎಸ್. ಸಿ .ಡಿ.ಸಿ. ಸಿ ಬ್ಯಾಂಕ್ ಪ್ರಭಾರ ಶಾಖಾ ವ್ಯವಸ್ಥಾಪಕ ಹಿರಿಯಣ್ಣ ಪೂಜಾರಿ ಸ್ವಾಗತಿಸಿ, ಪ್ರೇರಕಿ ವಿಶಾಲಾಕ್ಷಿ ವಂದಿಸಿದರು. ಸ್ವ.ಸಾಹಾಯ ಸಂಘಗಳ ಪ್ರೇರಕ ಪ್ರಶಾಂತ ನಿರೂಪಿಸಿದರು. ಸಹಕಾರಿ ಬ್ಯಾಂಕಿನ ಅನೇಕ ಗ್ರಾಹಕರು ಭಾಗವಹಿಸಿದ್ದರು.
Advertisement. Scroll to continue reading.