ಹೆಬ್ರಿ: ಚಾರ ಗ್ರಾಮದ ನವೋದಯ ವಿದ್ಯಾಲಯದ ಬಳಿ ಗುರುವಾರ ರಾತ್ರಿ ಬೈಕೊಂದು ಸ್ಕಿಡ್ ಆಗಿ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಅಲ್ಬಾಡಿ ನಿವಾಸಿಯಾದ ಚಿತ್ತರಂಜನ್ ಶೆಟ್ಟಿ (21) ಮೃತ ಯುವಕ.
ಈತ ಅಲ್ಬಾಡಿಯಿಂದ ಹೆಬ್ರಿ ಕಡೆಗೆ ತನ್ನ ಬೈಕಿನಲ್ಲಿ ಬರುತ್ತಿದ್ದಾಗ ಚಾರ ನವೋದಯದ ಬಳಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಪರಿಣಾಮ ಅದೇ ಸಮಯದಲ್ಲಿ ಹೆಬ್ರಿಯಿಂದ ಅಲ್ಬಾಡಿ ಕಡೆ ಹೋಗುತ್ತಿದ್ದ ಪಿಕಪ್ ವಾಹನ ಈತನ ಮೇಲೆ ಹರಿದು ಹೋಗಿ ಯುವಕ ಪಿಕಪ್ ನ ಅಡಿ ಸಿಲುಕಿಕೊಂಡ. ಪರಿಣಾಮ ತಲೆಗೆ ಗಂಭೀರವಾದ ಗಾಯವಾಗಿ ಚಿತ್ತರಂಜನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈತ ಅಲ್ಬಾಡಿಯ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದರು ಎನ್ನಲಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ವರದಿ : ಶ್ರೀದತ್ತ ಹೆಬ್ರಿ
Advertisement. Scroll to continue reading.