ಕರಾವಳಿ

ಬಾರಕೂರಿನಲ್ಲಿದೆ ಪರಂಪರಾಗತವಾಗಿ ಕಬ್ಬು ಬೆಳೆದು ಬೆಲ್ಲ ತಯಾರಿಸೋ ಕುಟುಂಬ| ದಿಕ್ಸೂಚಿ ನ್ಯೂಸ್ ವಿಶೇಷ ವರದಿ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಕರಾವಳಿ ಜಿಲ್ಲೆಯಲ್ಲಿ ಹಲವಾರು ವರ್ಷದಿಂದ ಸಾಂಪ್ರದಾಯಿಕವಾಗಿ ತಯಾರಾಗುವ ಬೆಲ್ಲವನ್ನು ಬಾರಕೂರು ಶ್ರೀ ವಿದ್ಯಾಗಣಪತಿ ಬೆಲ್ಲ ಇದೀಗ ಶ್ರಾವಣ ಮಾಸದಲ್ಲಿ ಆರಂಭಗೊಂಡಿದೆ.
ಹಲವಾರು ವರ್ಷದಿಂದ ಪರಂಪರಾಗತವಾಗಿ ಕಬ್ಬನ್ನು ಬೆಳೆದು ಬೆಲ್ಲ ಮಾಡುವ ಕುಟುಂಬವೊಂದು ಬಾರಕೂರಿನಲ್ಲಿದ್ದು, ಪರಿಶುದ್ಧ ಬೆಲ್ಲ ತಯಾರಿಕೆಯಿಂದ ಐತಿಹಾಸಿಕ ನಗರ ಬಾರಕೂರಿನ ಹೆಸರನ್ನು ಬೆಲ್ಲದ ಸಿಹಿಯೊಂದಿಗೆ ನಾಡಿನಾದ್ಯಂತ ಹೆಸರುವಾಸಿಯಾಗಿದೆ.


ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡ ಬಳಿಕ ಕಬ್ಬಿನ ಬೆಳೆಗಾರ ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಿರುವುದು ಬಾರಕೂರು ಶುದ್ಧ ಬೆಲ್ಲ ಘಟಕವಾಗಿದೆ. 30 ಮಂದಿ ಸಿಬ್ಬಂದಿಗಳಿಂದ ಕಬ್ಬು ಬೆಳೆಗಾರರಿಗೆ ಬೀಜ ಮತ್ತು ಬೆಳೆಗೆ ಯೋಗ್ಯ ಬೆಲೆಯಲ್ಲಿ ಖರೀದಿಸಿ ಘಟಕದವರೇ ಕಟಾವು ಮಾಡಿಸಿ ಇಲ್ಲಿನ ಆಲೆಮನೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣ ಮಟ್ಟದಲ್ಲಿ ಬೆಲ್ಲ ತಯಾರುಗೊಂಡು ಮಾರುಕಟ್ಟೆಗೆ ಹೋಗುತ್ತದೆ.


ಕರಾವಳಿ ಜಿಲ್ಲೆಯ ಅನೇಕ ದೇವಸ್ಥಾನಗಳಲ್ಲಿ ಪಂಚಕಜ್ಜಾಯ, ಗಣಹೋಮ ಮತ್ತು ಪ್ರಸಾದಕ್ಕೆ ಬಳಕೆಯಾಗುತ್ತಿದೆ . ಹಲವಾರು ಆಯುರ್ವೇದ ಔಷಧಿ ಸಂಸ್ಥೆಗೆ ಬೇಕಾಗುವ ಬೆಲ್ಲ ಬಾರಕೂರು ಬೆಲ್ಲ ಭದ್ರಸ್ಥಾನ ಪಡೆದುಕೊಂಡಿದೆ.
ಬಹತೇಕ ಉಡುಪಿ ಜಿಲ್ಲೆಯಲ್ಲಿ ಬೆಳೆದ ಕಬ್ಬು ಬೆಳೆಗಾರರಿಂದ ತಂದು ಕಡಿಮೆಯಾದಾಗ ಹೊರಜಿಲ್ಲೆಯಾ ಮಂಡ್ಯ, ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು, ಹಾಸನ ಭಾಗದಿಂದ ಕಬ್ಬನ್ನು ತರಿಸಿಕೊಳ್ಳಲಾಗುತ್ತದೆ.

ಪ್ರತೀ ದಿನ 5 ರಿಂದ 10 ಟನ್ ಕಬ್ಬು ತರಿಸಿಕೊಂಡು ಇಲ್ಲಿನ ನುರಿತ ಕೆಲಸಗಾರರಿಂದ ಕಬ್ಬಿನ ಹಾಲನ್ನು ತೆಗೆದು, 2 ಭಾಗದಲ್ಲಿ ಸೋಸಿ ಬಳಿಕ ಕೊಪ್ಪರಿಗೆ ಹಾಕಲಾಗುತ್ತದೆ. ಬಿಸಿಯಾಗಿ ಕುದಿಯಾಗಿ ಹದಗೊಂಡ ನಂತರ ಇನ್ನೊಂದು ಭಾಗಕ್ಕೆ ಹಾಕಿ ಮತ್ತೆ ಸೋಸಿದ ಬಳಿಕ ಬೆಲ್ಲವನ್ನು ಡಬ್ಬದಲ್ಲಿ ಮತ್ತು ಒಂದು ಕೆಜಿ, ಐದು ಕೆಜಿ ಯಲ್ಲಿ ಸಿದ್ಧಗೊಳ್ಳುತ್ತದೆ.
ತಯಾರಿಕಾ ಕೇಂದ್ರದಲ್ಲಿ ಕೆಜಿ ಒಂದಕ್ಕೆ 50 ರೂ. ನಿಗದಿ ಪಡಿಸಿದ್ದು, ದೂರದ ಹೊರ ರಾಜ್ಯದ ಮಾರುಕಟ್ಟೆಯಲ್ಲಿ 70 ರಿಂದ 80 ರೂ ಗೆ ಮಾರಾಟವಾಗುತ್ತಿದೆ.
ಬಹುತೇಕ ಕಡೆಯಲ್ಲಿ ಎಸ್. ವಿ. ಜಿ ಪರಿಶುದ್ಧ ಬಾರಕೂರು ಬೆಲ್ಲದ ಸವಿಯನ್ನು ಸವಿದವರು ಮತ್ತೆ ಅದನ್ನೇ ಬಯಸುತ್ತಾರೆ. ಪರಂಪರಾಗತವಾಗಿ ಬಂದ ಬೆಲ್ಲ ತಯಾರಿಕೆಯ ಶ್ರೇಷ್ಠತೆಯನ್ನು ಮತ್ತು ಗ್ರಾಹಕರನ್ನು ಉಳಿಸಿಕೊಂಡು ಬಂದಿರುವುದು ಒಂದು ಸಾಧನೆಯಾಗಿದೆ.

ಹಲವಾರು ವರ್ಷದಿಂದ ನಮ್ಮ ಹಿರಿಯರು ಕಬ್ಬನ್ನು ಬೆಳೆದು ಗಾಣದ ಮೂಲಕ ಬೆಲ್ಲ ತಯಾರಿ ಮಾಡುತ್ತಿದ್ದರು. ಬಳಿಕ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ನೀಡುತ್ತಿದ್ದರು. ಕಾರ್ಖಾನೆ ಮುಚ್ಚಿದ ಬಳಿಕ ನಾನು ಅದನ್ನ ಮುಂದುವರಿಸಿಕೊಂಡು ಬಂದಿದ್ದೇನೆ. ಗಣೇಶ್ ಪೂಜಾರಿ ಬಾರಕೂರು, ಶ್ರೀ ವಿದ್ಯಾಗಣಪತಿ ಬೆಲ್ಲ ತಯಾರಿಕಾ ಘಟಕದ ಮಾಲಕ

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com