ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಜಮೀಯ್ಯತುಲ್ ಫಲಾಹ್ ಬ್ರಹ್ಮಾವರ ತಾಲ್ಲೂಕು ಘಟಕ ವಾರ್ಷಿಕ ಮಹಾಸಭೆ ಹಾಗೂ ಸಾಧಕ ವಿದ್ಯಾರ್ಥಿಗಳ ಸನ್ಮಾನ ಭಾನುವಾರ ಉಪ್ಪಿನಕೋಟೆ ಜಾಮಿಯಾ ಮಸೀದಿಯಲ್ಲಿ ಜರುಗಿತು. ಪಿ.ಯುಸಿ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಾದ ಸಾಸ್ತಾನದ ಅಮಾನ್ ಅಹಮ್ಮದ್ ಶೇಖ್, ಬೈಕಾಡಿಯ ಮಹಮ್ಮದ್ ಸಾಹಿಲ್ ಸಾಸ್ತಾನದನಿಶಾಇಮ್ರಾ, ಸಾಲಿಗ್ರಾಮದ ಮುಸ್ಖಾನ್ ಮತ್ತು ಎಸ್.ಎಸ್. ಎಲ್. ಸಿ.ಯ ಹೈಕಾಡಿಯ ನಿಶಾನಾಜ್, ಹೂಡೆನಿವಾಸಿ ತೂಬಫಾತಿಮಾ, ಹಾಗೂ ಇರಾಮ್ ಇಲ್ಯಾಸ್ ಶೇಖ್ ಇವರಿಗೆನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕೇಂದ್ರ ಕಚೇರಿಯ ವೀಕ್ಷಕರಾಗಿ ಹಸನ್ ಮುವಾದ್ ಬೈಂದೂರು, ಕುಂದಾಪುರ ತಾಲ್ಲೂಕು ಘಟಕದ ಕಾರ್ಯದರ್ಶಿ ಅಬೂ ಮುಹಮ್ಮದ್ ಹಾಗೂ ಶೇಖ್ ಸಿಕಂದರ್ ಸಾಹೇಬ್ ಆಗಮಿಸಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜಮೀಯ್ಯತುಲ್ ಫಲಾಹ್ ಜಿಲ್ಲಾಧ್ಯಕ್ಷ ಶಫಿ ಅಹ್ಮದ್ ಖಾಜಿ ಅವರನ್ನು ಸನ್ಮಾನಿಸಲಾಯಿತು. ಇಮಾಮ ಇನಾಮುಲ್ ಹಸನ್ ಕಿರಾತ್ ಪಠಣ ಮಾಡಿ, ಬ್ರಹ್ಮಾವರ ತಾಲ್ಲೂಕು ಘಟಕದ ಅಧ್ಯಕ್ಷ ಮಹಮ್ಮದ್ ಆಸಿಫ್ ಬೈಕಾಡಿ ಸ್ವಾಗತಿಸಿ, ಜನಾಬ್ ಕೋಟ ಇಬ್ರಾಹಿಂ ಸಾಹೇಬ್ ಪ್ರಾಸ್ತಾವಿಕವಾಗಿಮಾತನಾಡಿದರು. ಕಾರ್ಯದರ್ಶಿ ತಾಜುದ್ದೀನ್ ಇಬ್ರಾಹಿಂ ವರದಿ ಮತ್ತು ಲೆಕ್ಕಪತ್ರ ಮಂಡಿಸಿ, ಅಸ್ಲಮ್ ಹೈಕಾಡಿ ಹಾಗೂ ಅಬ್ದುರ್ರಹ್ಮಾನ್ ಹಂಗಾರಕಟ್ಟೆ ವಂದಿಸಿದರು. ಆಜಾದ್ ಮೊಹಮ್ಮದ್ ಹಂದಾಡಿ ಕಾರ್ಯಕ್ರಮ ನಿರೂಪಿಸಿದರು.
Advertisement. Scroll to continue reading.