ವರದಿ : ಶ್ರೀದತ್ತ ಹೆಬ್ರಿ
ಬೆಂಗಳೂರು : ಜನ್ಮಭೂಮಿ ಫೌಂಡೇಶನ್ ಬೆಂಗಳೂರು ಆಯೋಜಿಸಿದ ಕರೋನ ವೈರಸ್ ಹಾಗೂ ನಾಡಿನ ಸಾಧಕರಿಗೆ ಪ್ರಶಸ್ತಿ ಸಮಾರಂಭದಲ್ಲಿ ಗಣನೀಯವಾಗಿ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಬ್ರಿ ಕುಚ್ಚೂರಿನ ಶಾಂತಿನಿಕೇತನ ಯುವ ವೃಂದಕ್ಕೆ ಕರ್ನಾಟಕ ರತ್ನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷರಾದ ರಾಜೇಶ್ ಗೌರವ ಸ್ವೀಕರಿಸಿದರು.
ಸಮಾರಂಭದಲ್ಲಿ ಖ್ಯಾತ ಸಾಹಿತಿಗಳಾದ ಡಾ. ಕುಂ ವೀರಭದ್ರಪ್ಪ , ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶ್ ಹೊಸಮನಿ ಸಿಸಿಬಿ ಪರಮೇಶ್ವರಪ್ಪ, ಚಿತ್ರನಟ ಭುವನ್ ಪೊನ್ನಪ್ಪ, ಚಿತ್ರ ನಟಿ ಪೂಜಾ ರಮೇಶ್, ಪತ್ರಕರ್ತ ಮಾರುತಿ ಬಡಿಗೇರ್ ಮತ್ತಿತರರು ಉಪಸ್ಥಿತರಿದ್ದರು
Advertisement. Scroll to continue reading.