ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪ್ರಾಥಮಿಕ ಆರೋಗ್ಯ ಕೇಂದ್ರ ಬಾರಕೂರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೂರಾಡಿ , ಸ್ಪೂರ್ತಿ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಇವರ ನೇತ್ರತ್ವದಲ್ಲಿ 9ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ “ವ್ಯಾಕ್ಸಿನೇಷನ್ ಅಭಿಯಾನ” ಇಂದು ನಡೆಯಿತು. ಬಾರಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರೋಹಿಣಿ ಅವರು ಪರಮೇಶ್ವರ ಮಡಿವಾಳ ಕೂರಾಡಿ ಇವರಿಗೆ ವ್ಯಾಕ್ಸಿನೇಷನ್ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶೇಖರ್ ಹೆಗ್ಡೆ ಕೂರಾಡಿ, ಗಣೇಶೋತ್ಸವ ಸಮಿತಿ ಸ್ಥಾಪಕ ಅಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಡಾ.ಸುರೇಶ್ ಶೆಟ್ಟಿ ,ಹನೆಹಳ್ಳಿ ಗ್ರಾಮಪಂಚಾಯತ್ ಸದಸ್ಯ ಚಂದ್ರಮರಕಾಲ, ಗೌರವ ಅಧ್ಯಕ್ಷ ರಾಮದಾಸ್ ಟೈಲರ್ , ಸುರೇಶ್ ಶೆಟ್ಟಿ ಕೂರಾಡಿ, ಸಂದೀಪ್ ಅಮೀನ್, ರವಿರಾಜ್ ಕೂರಾಡಿ, ಪ್ರದೀಪ್ ಮರಕಾಲ, ಕಿರಣ್ ಸಾಲ್ಯಾನ್, ಪ್ರಶಾಂತ್ ಪೂಜಾರಿ, ಪ್ರವೀಣ್ ಆಚಾರ್, ನಿಹಾಲ್ ಶೆಟ್ಟಿ, ಸಚಿನ್ ಪೂಜಾರಿ, ಹಾಗೂ ಆಶಾ, ಅರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು
Advertisement. Scroll to continue reading.