ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪತ್ರಿಕಾ ವಿತರಕರ ದಿನಾಚರಣೆಯ ಪ್ರಯುಕ್ತ ಬಾರಕೂರು ರೋಟರಿ ಕ್ಲಬ್ ನ ವತಿಯಿಂದ ಬಾರಕೂರಿನಲ್ಲಿ ಸುಮಾರು 40 ವರ್ಷಗಳಿಂದ ದಿನ ಪತ್ರಿಕೆಗಳನ್ನು ವಿತರಿಸುತ್ತಿರುವ ರಾಘವೇಂದ್ರ ಶಾಸ್ತ್ರಿ ಹಾಗೂ ಕೂರಾಡಿ ಪರಿಸರದಲ್ಲಿ ಸುಮಾರು 12 ವರ್ಷಗಳಿಂದ ಪತ್ರಿಕೆಗಳನ್ನು ವಿತರಿಸುತ್ತಿರುವ ರಾಮದಾಸ ಅವರನ್ನು ನಗದು, ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
ಬಾರಕೂರು ರೋಟರಿ ಅಧ್ಯಕ್ಷ ರೋ.ಚರಣ್ ಬಿ.ಶೆಟ್ಟಿ, ರೋಟರಿ ರತ್ನಾಕರ ಶೆಟ್ಟಿ, ಜಯಾನಂದ ಪೂಜಾರಿ, ಸುಧಾಕರ ರಾವ್ ಮೊದಲಾದವರು ಉಪಸ್ಥಿತರಿದ್ದರು.
Advertisement. Scroll to continue reading.