ಕೋಟ: ಹೈಡ್ರೋಕ್ಲೋರಿಕ್ ಆ್ಯಸಿಡ್ ತುಂಬಿದ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಣೂರು ಬಾಳೆಬೆಟ್ಟು ಸಮೀಪ ರವಿವಾರ ಮುಂಜಾನೆ ನಡೆದಿದೆ.
ಕಾರವಾರದಿಂದ ಕೊಚ್ಚಿಗೆ ಕಡೆಗೆ ಹೊರಟಿದ್ದ 23 ಟನ್ ಹೈಡ್ರೋಕ್ಲೋರಿಕ್ ಆ್ಯಸಿಡ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಕೋಟ ಗ್ರಾಮಪಂಚಾಯತ್ ನ ಮಣೂರು ಬಾಳೆಬೆಟ್ಟು ಸಮೀಪ ಭಾನುವಾರ ಮುಂಜಾನೆ 4:30ಕ್ಕೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕ್ಕೆ ಢಿಕ್ಕಿ ಹೊಡೆದಿದೆ. ನಂತರ ಸುಮಾರು 30 ಮೀಟರ್ ದೂರಕ್ಕೆ ಚಲಿಸಿ ಉರುಳಿಬಿದ್ದಿದೆ. ಪರಿಣಾಮ ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಕೋಟ ಆರಕ್ಷಕರು, ಅಗ್ನಿಶಾಮಕ ದಳದ ಸಿಬ್ಬಂದಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತೆರವುಗೊಳಿಸುವಲ್ಲಿ ಯಶಸ್ವಿಯಾದರು.ಕುಂದಾಪುರ ವಿಭಾಗದ ಅಗ್ನಿಶಾಮಕ ದಳದ ಪ್ರದೀಪ ನಾಯಕ್,ಸಂತೋಷ ಶೆಟ್ಟಿ, ಸುಂದರ್ ಬಿ, ನಾಗರಾಜ್ ಪೂಜಾರಿ,ಬಸವರಾಜ್ ಹಳ್ಳದ್ ಗೆಣ್ಣೂರ, ಗ್ರಹರಕ್ಷಕ ಆಕಾಶ್ ಕುಮಾರ್, ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ, ನವತಯಗ ಕಂಪನಿಯ ಸಾಸ್ತಾನ ಟೋಲ್ ಸಿಬ್ಬಂದಿ ಯೋಗೀಶ್ ನಾಯಿರಿ ಮತ್ತಿತರರು ಉಪಸ್ಥಿತರಿದ್ದರು.
ವರದಿ : ದಿನೇಶ್ ರಾಯಪ್ಪನಮಠ
Advertisement. Scroll to continue reading.