ಪರ್ಕಳ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ
Published
0
ಪರ್ಕಳ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಾಗೂ ಸಾರ್ವಜನಿಕರಿಂದ ಬಾಬುರಾಯ ಸರ್ಕಲ್ ಮುಂದೆ ಪ್ರತಿಭಟನೆ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ವಾಹನ ಚಾಲಕರಿಗೆ ತೊಂದರೆಯಾಗುವುದರ ಜೊತೆಗೆ ಭೂ ಸಂತ್ರಸ್ತರಿಗೆ ಕಳೆದ ನಾಲ್ಕು ತಿಂಗಳಿಂದ ಹಣ ಬಿಡುಗಡೆ ಮಾಡದೆ ವಿಳಂಬ ಮಾಡುತ್ತಿರುವ ಜಿಲ್ಲಾಡಳಿತ, ಮತ್ತು ಬಿಜೆಪಿ ಸರಕಾರದ ಜನನಾಯಕರ ವಿಭಿನ್ನ ಹೇಳಿಕೆಯ ಬೇಸತ್ತು ಅವರ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಈ ಸಂದರ್ಭ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ನ ರಮೇಶ್ ಕಾಂಚನ್ ಮಾತನಾಡಿ, ಭೂ ಸಂತ್ರಸ್ತರಿಗೆ ಹಣ ಶೀಘ್ರ ಬಿಡುಗಡೆ ಮಾಡಬೇಕು. ನೂತನ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಅಮೃತ ಶೆಣೈ, ಸುಕೇಶ್ ಕುಂದರ್ ಹೆರ್ಗಾ, ಮೋಹನ್ ದಾಸ್ ನಾಯಕ್ ಪರ್ಕಳ, ಗಣೇಶ್ ರಾಜ್ ಸರಳೇಬೆಟ್ಟು, ಗಣೇಶ್ ನೆರ್ಗಿ, ಸುಧಾಕರ್ ಪೂಜಾರಿ ದೇವಸ್ಥಾನ, ಸದಾನಂದ ಪೂಜಾರಿ, ಸತೀಶ್ ಶೆಟ್ಟಿ ಕೆಳ ಪರ್ಕಳ, ಅಶೋಕ್ ಸಾಲಿಯಾನ್ ಹೆರ್ಗ, ಗಣೇಶ್ ಮಾರುತಿ ನಗರ, ನವೀನ್ ಪೂಜಾರಿ ಶೆಟ್ಟಿ ಬೆಟ್ಟು, ದಿನೇಶ್ ಪೂಜಾರಿ ಮದಗ, ತುಳಜಾ ಉಪೇಂದ್ರ ನಾಯ್ಕ್ ಹಿರಿಯ ಕಾಂಗ್ರೆಸ್ ನಾಯಕ ಶಂಭು ಶೆಟ್ಟಿ ಗೋಪಾಲ ಆಚಾರ್ಯ, ದೇವಿ ಪ್ರಸಾದ್ ಆಚಾರ್ಯ ಆದರ್ಶ ಶೆಟ್ಟಿಗಾರ್ ಕೆಳಪರ್ಕಳ ಹರೀಶ್ ಪೂಜಾರಿ ಕೆಳ ಪರ್ಕಳ, ಹರೀಶ್ ನಾಯ್ಕ ಮಾಣಿಬೆಟ್ಟು, ನೀರಜ್ ಪಾಟೀಲ್ ಶೆಟ್ಟಿ ಬೆಟ್ಟು, ವೆಂಕಟೇಶ್ ಶೆಟ್ಟಿಗಾರ್, ಜಯ ಶೆಟ್ಟಿ ಬನ್ನಂಜೆ, ವಾಲ್ಟರ್ ಡಿಸೋಜ ಕೊಳಲಗಿರಿ ಮೊದಲಾದವರು ಭಾಗವಹಿಸಿದ್ದರು. ರಸ್ತೆ ತಡೆ ನಡೆಸಿ, ಪ್ರತಿಭಟನೆಯ ಅಂಗವಾಗಿ ಬಾಳೆಗಿಡ ನೆಟ್ಟು , ಸರಕಾರ ವಿರುದ್ಧ ಘೋಷಣೆ ಕೂಗಲಾಯಿತು.