ಸಮಾಜಮುಖಿ ಚಿಂತಕ, ಖ್ಯಾತ ಉದ್ಯಮಿ ಆರ್.ಎನ್.ಶೆಟ್ಟಿ ವಿಧಿವಶ
Published
0
ಆರ್.ಎನ್.ಎಸ್ ಶಿಕ್ಷಣ ಮತ್ತು ಉದ್ಯಮ ಸಮೂಹಗಳ ಸ್ಥಾಪಕ ಹಾಗೂ ಸಮಾಜಮುಖಿ ಚಿಂತಕ, ದಾನಿ ಆರ್.ಎನ್. ಶೆಟ್ಟಿ(92) ವಿಧಿವಶರಾಗಿದ್ದಾರೆ. ಬೆಂಗಳೂರಿನಲ್ಲಿದ್ದ ಅವರು ಹೃದಯಾಘಾತದಿಂದ ಬೆಳಿಗ್ಗೆ 3.30ರ ಸುಮಾರಿಗೆ ಮೃತಪಟ್ಟಿದ್ದಾರೆ. ಉತ್ತರಹಳ್ಳಿಯ ಆರ್.ಎನ್.ಎಸ್.ತಾಂತ್ರಿಕ ವಿದ್ಯಾಲಯ ಕಾಲೇಜು ಆವರಣದಲ್ಲಿ ಮಧ್ಯಾಹ್ನ 2 ಗಂಟೆಗೆ ಸಾರ್ವಜನಿಕ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಇಡಲಾಗುವುದು. ಸಂಜೆಯ ವೇಳೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು. ಶೆಟ್ಟಿಯವರು ನಾಲ್ವರು ಹೆಣ್ಣೂ, ಮೂವರು ಗಂಡು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ಆರ್.ಎನ್.ಶೆಟ್ಟಿ ಅಗಲಿಕೆಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
೧೯೨೮ ಆಗಸ್ಟ್ ೧೫ ರಂದು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಜನಿಸಿದ ಆರ್.ಎನ್.ಶೆಟ್ಟಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಹಬ್ಬಿಸಿರುವ ವ್ಯಕ್ತಿ. ಶ್ರೀಕ್ಷೇತ್ರ ಮುರುಡೇಶ್ವರದ ಅಭಿವೃದ್ಧಿ ಕರ್ಯದಲ್ಲಿ, ನವೀಕರಣ ಕರ್ಯದಲ್ಲಿ ಆರ್.ಎನ್.ಶೆಟ್ಟಿ ಕೊಡುಗೆ ಅಪಾರ. ೧೯೬೧ ರಲ್ಲಿ ಮೂಲಸೌರ್ಯ ಕಂಪೆನಿ ಹುಟ್ಟು ಹಾಕಿ ಆ ಮೂಲಕ ಮಹತ್ವದ ಕರ್ಯ ಮೆರೆದಿದ್ದಾರೆ. ಹಿಡಕಲ್ ಜಲಾಶಯ, ಸೂಪಾ ಜಲಾಶಯ, ಗೆರುಸೊಪ್ಪೆ ಜಲಾಶಯ, ವಾರಾಹಿ ಜಲ ವಿದ್ಯುತ್ ಯೋಜನೆ, ಕೆ.ಎಲ್.ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಕೊಂಕಣ ರೈಲು ಸುರಂಗ, ರಾಷ್ಟಿçÃಯ ಹೆದ್ದಾರಿಗಳ ನಿರ್ಮಾಣ ಹೀಗೆ ಹಲವಾರು ಯೋಜನೆಗಳನ್ನು ನಿರ್ವಹಿಸಿದ ಕೀರ್ತಿ ಶೆಟ್ಟಿಯವರದು. ಇವರ ಈ ಮಹತ್ಕರ್ಯಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವರು ಪ್ರಶಸ್ತಿಗಳು, ಗೌರವ ಪುರಸ್ಕಾರಗಳು ಅರಸಿ ಬಂದಿವೆ. ಕೋವಿಡ್ ೧೯ ಹಿನ್ನೆಲೆ ಪಿಎಂ ಕರ್ಸ್ ಫಂಡ್ಗೆ ೨.೪ ಕೋ.ರೂ, , ಸಿಎಂ ಪರಿಹಾರ ನಿಧಿಗೆ ೧ ಕೋಟಿ ೫ ಲಕ್ಷ ರೂ. ನೀಡಿದ್ದಾರೆ.