Uncategorized

ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನಗಳ್ಳತನ ತಡೆಯಲು ಗ್ಯಾರೇಜ್‌ ಮಾಲಕರೊಂದಿಗೆ ಸಭೆ

0

ವರದಿ : ದಿನೇಶ್ ರಾಯಪ್ಪನಮಠ

ಕೊಲ್ಲೂರು:  ವಿವಿಧೆಡೆ ದನಕಳ್ಳತನ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಗ್ಯಾರೇಜ್‌ ಮ್ಹಾಲಕರ ಸಭೆ ಎ ಎಸ್ ಐ ಶೇಖರ್ ಮಲ್ಪೆ ಅವರ ನೇತೃತ್ವದಲ್ಲಿ ಶನಿವಾರ ಜರುಗಿತು.

 ಈ ಸಂದರ್ಭ ಕೊಲ್ಲೂರು ಠಾಣಾ ವ್ಯಾಪ್ತಿಯ ಗ್ಯಾರೇಜ್‌ ಮ್ಹಾಲಕರು ಸಭೆಯಲ್ಲಿ ಭಾಗವಹಿಸಿದ್ದು, ದನ ಕಳ್ಳತನ ಪ್ರಕರಣದಲ್ಲಿ ಭಾಗಿಯಾದಂತಹ ವಾಹನಗಳು ರಿಪೇರಿಗಾಗಲಿ, ಸರ್ವಿಸ್‌ ಪ್ರಯುಕ್ತ ಗ್ಯಾರೇಜಿಗೆ ಬಂದಲ್ಲಿ ಕೂಡಲೇ ಠಾಣೆಗೆ ಮಾಹಿತಿ ನೀಡುವಂತೆ ಹಾಗೂ ಗ್ಯಾರೇಜ್‌ ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಮತ್ತು ರಾತ್ರಿ ವೇಳೆಯಲ್ಲಿ ಒರ್ವ ವ್ಯಕ್ತಿಯಾದರೂ ಉಳಿದುಕೊಳ್ಳುವಂತೆ ಸೂಚಿಸಲಾಯಿತು. ಈ ಮೂಲಕ ಯಾವುದೇ ರೀತಿಯ ದನ ಕಳ್ಳತನ ಪ್ರಕರಣಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸುವಂತೆ ಎ ಎಸ್ ಐ ಶೇಖರ್ ಮಲ್ಪೆ ಸೂಚನೆ ನೀಡಿದರು.

Advertisement. Scroll to continue reading.

ಠಾಣಾಧಿಕಾರಿಗಳ ಸೂಚನೆಗೆ ಪ್ರತಿಕ್ರಿಯಿಸಿ ಗ್ಯಾರೇಜ್‌ ಮಾಲಕರು ದನ ಕಳ್ಳತನ ಪ್ರಕರಣಗಳನ್ನು ತಡೆಯಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com