ಕರಾವಳಿ

ಕೋಟ : ಪ್ರೀಮಿಯಮ್ ಫಿಟ್ನೆಸ್ ಜಿಮ್ ಕೇಂದ್ರ ಶುಭಾರಂಭ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಸ್ವಂತ ಉದ್ಯಮದತ್ತ ಯುವ ಮನಸ್ಸುಗಳು ಮುಂದಾಗಬೇಕು ಆಗ ಮಾತ್ರ ನಿರುದ್ಯೋಗದ ಸಮಸ್ಯೆ ಬಗೆಹರಿಯಬಹುದು ಎಂದು ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ ನಾವಡ ಹೇಳಿದ್ದಾರೆ.
ಕೋಟ ಹೈಸ್ಕೂಲ್ ಬಳಿ ಉರಾಳ ಕಾಂಪ್ಲೆಕ್ಸನಲ್ಲಿ ಪ್ರಜ್ವಲ್ ಕಾಂಚನ್ ಮಾಲಿಕತ್ವದ ಪ್ರೀಮಿಯಮ್ ಫಿಟ್ನಸ್ ಜಿಮ್ ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಮನಸ್ಸು ಬೇರೆಡೆ ಸೆಳೆಯ ಬಾದರು ಎಂಬ ನೆಲಗಟ್ಟಿನೊಂದಿಗೆ ಇಂಥಹ ಕೇಂದ್ರಗಳು ಸಹಕಾರಿಯಾಗಲಿದೆ. ಕ್ರೀಡೆಯಾಗಿ ಕಾಣುವುದರ ಜೊತೆಗೆ ಆರೋಗ್ಯ ಕೂಡಾ ವೃದ್ಧಿಸುತ್ತದೆ.ಈ ಹಿಂದೆ ಈ ರೀತಿಯ ಜಿಮ್ ಕಾಣಬೇಕಾದರೆ ಸಿಟಿ ಭಾಗದಲ್ಲಿ ಹೊರತು ಗ್ರಾಮೀಣ ಭಾಗದಲ್ಲಿ ಸಾಧ್ಯವಿರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಇದರ ಲಾಭ ದೊರೆಕುತ್ತಿದೆ. ಈ ನಿಟ್ಟಿನಲ್ಲಿ ಪ್ರಜ್ವಲ್ ಕಾಂಚನ್‍ರವರ ಕಾರ್ಯ ಮಾದರಿಯಾಗಿದೆ ಎಂದರು.


ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಉಡುಪಿಯ ಕಾರ್ತಿಕ್ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಬರಿ ಕನ್ಟ್ರಕ್ಷನ್ ಕೋಟ ಇದರ ಸುರೇಶ್ ಕಾಂಚನ್ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ್, ಸಾಲಿಗ್ರಾಮ ಪ.ಪಂ ಸದಸ್ಯ ಶ್ಯಾಮಸುಂದರ ನಾಯರಿ, ಕೋಟತಟ್ಟು ಗ್ರಾ.ಪಂ ಉಪಾಧ್ಯಕ್ಷ ವಾಸು ಪೂಜಾರಿ, ಕಟ್ಡಡದ ಮಾಲಿಕ ಗೋವಿಂದ ಉರಾಳ, ಪವರ್ ಲಿಫ್ಟರ್ ಅಶ್ವಿನ್ ಸನಿಲ್, ಬಾಡಿ ಬಿಲ್ಡರ್ ವಿಘ್ನೇಶ್, ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ಸತೀಶ್ ಕುಂದರ್, ಊರಿನ ಹಿರಿಯರಾದ ರಾಮ ಮರಕಾಲ, ಜಿಮ್ ಮಾಲಿಕ ಪ್ರಜ್ವಲ್ ಕಾಂಚನ್, ಪ್ರಮೋದ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಭಿಜಿತ್ ಪಾಂಡೇಶ್ಚರ ಸ್ವಾಗತಿಸಿ, ನಿರೂಪಿಸಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com