ಕರಾವಳಿ

ಪಡುಬಿದ್ರಿ : ಶ್ರೀಭಗವತಿ ಗ್ರೂಫ್ ಸಹಕಾರದಿಂದ ನಿರ್ಮಾಣಗೊಂಡ ನೂತನ ಗೃಹ ಹಸ್ತಾಂತರ

0

ಪಡುಬಿದ್ರಿ : ಕಾಪು ತಾಲೂಕಿನ ಅದಮಾರಿನ ಲತಾ ಮತ್ತು ಶಂಕರ್ ಪೂಜಾರಿ ದಂಪತಿಯ ಗೃಹ ನಿರ್ಮಾಣ ಕಾರ್ಯ ಕಳೆದ ಸುಮಾರು 8 ವರ್ಷಗಳಿಂದ ಅಪೂರ್ಣಗೊಂಡಿದ್ದು, ಈ ಬಗ್ಗೆ ಪಡುಬಿದ್ರಿ ಸಮಾಜಸೇವೆ ಯುವಕರ ತಂಡ ಶ್ರೀಭಗವತಿ ಗ್ರೂಫ್ ತನ್ನ ವಿಶೇಷ ಸೇವಾ ಯೋಜನೆಯ ಮುಖಾಂತರವಾಗಿ ವಿವಿಧ ಸಹೃದಯಿ ದಾನಿಗಳ ಸಹಕಾರದಿಂದ ಗೃಹ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

ಇಂದು ನೂತನ ಗೃಹವನ್ನು ಕಳಶ ನೀಡುವ ಮೂಲಕ ಶಂಕರ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಮನೆ ನಿರ್ಮಾಣ ಕಾರ್ಯದಲ್ಲಿ ಶ್ರೀಭಗವತಿ ಗ್ರೂಫ್ ನೊಂದಿಗೆ ಸಹಕರಿಸಿದ ಪ್ರೇಮಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪಡುಬಿದ್ರಿಯ ಮಿಥುನ್.ಆರ್.ಹೆಗ್ಡೆ, ಉದಯ ಕುಮಾರ್ ಶೆಟ್ಟಿ ಇನ್ನಾ, ಯುವರಾಜ್ ಕುಲಾಲ್, ದೇವಿಪ್ರಸಾದ್ ಬೆಳ್ಳಿಬೆಟ್ಟು , ಸಂದೇಶ್ ಶೆಟ್ಟಿ ಪಾದೆಬೆಟ್ಟು, ಸಂದೀಪ್, ಪ್ರಭಾಕರ ಕಂಚಿನಡ್ಕ, ಪ್ರಜ್ವಲ್ ಕುಲಾಲ್, ದೀಕ್ಷಿತ್ ಶೆಟ್ಟಿ, ದಿಲೀಪ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

Click to comment

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com