ಹೆಬ್ರಿ : ನದಿಯಲ್ಲಿ ಕಾಲು ತೊಳೆಯಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಸೀತಾ ನದಿಯ ಪಾಲಾದ ಘಟನೆ ನಡೆದಿದೆ.
ಹೆಬ್ರಿ ತಾಲ್ಲೂಕಿನ ಕುಚ್ಚೂರು ಗ್ರಾಮದ ಬೇಳಂಜೆ ಕೆಳಬಾದ್ಲು ಹರೀಶ್ ನಾಯಕ್ (37) ನೀರು ಪಾಲಾದವರು. ಸೀತಾನದಿಯಲ್ಲಿ ಕಾಲು ತೊಳೆಯಲು ನೀರಿಗೆ ಇಳಿದ ಸಂದರ್ಭ ಘಟನೆ ಸಂಭವಿಸಿದೆ. ಈತನ ಶವ ಬುಧವಾರ ನದಿಯಲ್ಲಿ ಪತ್ತೆಯಾಗಿದ್ದು, ಶವ ಮುಖ ಗುರುತು ಸಿಗದಷ್ಟು ಕೊಳೆತು ಹೋಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಶ್ರೀದತ್ತ ಹೆಬ್ರಿ
Advertisement. Scroll to continue reading.