ಬೆಂಗಳೂರು : ಕೃಷಿ ಮೇಳ-2021ಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ
Published
0
ವರದಿ : ದಿನೇಶ್ ರಾಯಪ್ಪನಮಠ
ಬೆಂಗಳೂರು : ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಆಯೋಜಿಸಿರುವ ‘ಕೃಷಿ ಮೇಳ-2021’ ಕ್ಕೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು.
ಕೃಷಿ ಮೇಳದ ಪ್ರಮುಖ ಆಕರ್ಷಣೆಯಾದ ವಿಶಿಷ್ಟ ಮಳಿಗೆಗಳಿಗೆ ಭೇಟಿ ನೀಡಿದ ಸಚಿವೆ, ಹಲವಾರು ವಿಶೇಷ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆದು ನೆರೆದ ಕೃಷಿಕರು, ಕೃಷಿ ಆಸಕ್ತರೊಂದಿಗೆ ಸಂವಾದ ನಡೆಸಿದರು.
ಈ ಕೃಷಿ ಮೇಳದಲ್ಲಿ ಕೃಷಿ ವಿಚಾರಗಳಿಗೆ ಸಂಬಂಧಪಟ್ಟ ವಿವಿಧ ತಂತ್ರಜ್ಞಾನಗಳ ಪ್ರದರ್ಶನ, ಬೀಜದ ತಳಿಗಳ ಮಾಹಿತಿ-ಮಾರಾಟ, ಕೃಷಿ ಪದ್ಧತಿಗಳ ಪ್ರದರ್ಶನ, ಸಸ್ಯ ಪ್ರಭೇದಗಳ ಮಾರಾಟ ಹಾಗೂ ಇತರ ಹಲವಾರು ಮಳಿಗೆಗಳು ಕೃಷಿ ಆಸಕ್ತರಿಗೆ, ರೈತರ ಮಾಹಿತಿಗಾಗಿ ತೆರೆದಿದೆ.