ಕರಾವಳಿ

ಕುತೂಹಲ ಹೆಚ್ಚಿಸಿದೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ!

0

ವರದಿ : ಬಿ.ಎಸ್.ಆಚಾರ್ಯ

ಉಡುಪಿ: ವಿಧಾನ ಪರಿಷತ್ ಚುನಾವಣೆ ಕಾವು ಏರುತ್ತಿದ್ದರೆ ಉಡುಪಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಬಾರೀ ಕೂತೂಹಲ ಮೂಡಿಸುತ್ತಿದೆ.
ಉಡುಪಿ ಜಿಲ್ಲೆಯಾದ ಬಳಿಕ ಕನ್ನಡ ಸಾಹಿತ್ಯ ಪರಿಷತ್‍ಗೆ ಕುಂದಾಪುರದ ಎ.ಎಸ್.ಎನ್. ಹೆಬ್ಬಾರ್ , ಉಪ್ಪುಂದ ಚಂದ್ರಶೇಖರ ಹೊಳ್ಳ , ಅಂಬಾತನಯ ಮುದ್ರಾಡಿ ಅಧ್ಯಕ್ಷರಾಗಿದ್ದು, ಕಳೆದ ಹತ್ತು ವರ್ಷದಿಂದ ನಿವೃತ್ತ ಶಿಕ್ಷಕ ನೀಲಾವರ ಸುರೇಂದ್ರ ಅಡಿಗರು ಅಧ್ಯಕ್ಷರಾಗಿದ್ದು, ಈ ಬಾರಿ ಕೂಡಾ ಜಿಲ್ಲಾ ಅಧ್ಯಕ್ಷಗಾದಿಗೆ ಸ್ವರ್ಧೆಯಲ್ಲಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಹಲವಾರು ಸಮಯದಿಂದ ಕ್ರೀಯಾಶೀಲರಾಗಿದ್ದ ಬ್ರಹ್ಮಾವರ ಕುಂಜಾಲು ಮೂಲದ ಸುಬ್ರಹ್ಮಣ್ಯ ಬಾಸ್ರಿ ಮತ್ತು ಬೈಂದೂರು ಭಾಗದ ಡಾ.ಸುಬ್ರಹ್ಮಣ್ಯ ಭಟ್ ಅಧ್ಯಕ್ಷ ಸ್ಥಾನಕ್ಕೆ ಸ್ವರ್ಧೆಯಲ್ಲಿದ್ದಾರೆ.
ಈ ಬಾರಿ ನವೆಂಬರ್ 21 ಭಾನುವಾರ 7 ತಾಲೂಕಿನ 8 ಮತಗಟ್ಟೆಯಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು ಕೇವಲ 1987 ಮತದಾರರಿದ್ದು, 254 ಬೈಂದೂರು, 435 ಕುಂದಾಪುರ, 302 ಕೋಟ , 140 ಬ್ರಹ್ಮಾವರ , 451 ಉಡುಪಿ, 136 ಕಾಪು ಮತ್ತು 135 ಹೆಬ್ರಿ, 134 ಕಾರ್ಕಳ ಇದ್ದಾರೆ. ಮತದಾರರಲ್ಲಿ ನಾನಾ ಕಾರಣದಿಂದ ಅನೇಕರು ಇಲ್ಲದಿದ್ದು, ಇರುವ ಮತದಾರರು ಅಧ್ಯಕ್ಷರನ್ನು ಮತದಾನದ ಮೂಲಕ ಚುನಾಯಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಹೆಸರಿಗೆ ಇದ್ದರೂ , ಕನ್ನಡದ ಮನಸ್ಸುಗಳನ್ನು ಸರಿಯಾಗಿ ಬೆಸೆಯಲು ಇನ್ನೂ ಕೂಡಾ ಸಾದ್ಯವಾಗಿಲ್ಲ ಎಂದೇ ಹೇಳಬಹುದು. ಕೇವಲ ಕೆಲವೇ ಜನರು ಇದರ ಸದಸ್ಯರಾಗಿದ್ದು ಕನ್ನಡ ಭಾಷೆಯನ್ನು ಬರೆಯಲು ಮಾತನಾಡಲು ತಿಳಿದವರು ಮತ್ತು ಭಾಷೆಯನ್ನು ಬಿತ್ತರಿಸುವ ಮತ್ತು ಬೆಳೆಸುವ ಪತ್ರಕರ್ತರು , ಕನ್ನಡ ಶಾಲಾ ಶಿಕ್ಷಕರು , ಯಕ್ಷಗಾನ, ಜನಪದ ಕಲಾವಿದರ ಸದಸ್ಯತ್ವ ಬಾರಿ ವಿರಳ ಇದ್ದು , ಮುಂದಿನ ದಿನದಲ್ಲಿ ಯಾರು ಚುನಾಯಿತರಾದರೂ ತಾಲೂಕು, ಗ್ರಾಮ, ಹೋಬಳಿ ಮಟ್ಟದಲ್ಲಿ ಕನ್ನಡ ಮನಸುಗಳನ್ನು ಕಟ್ಟುವ, ಸದಸ್ಯರನ್ನು ಹೆಚ್ಚಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ ನಿಂದ ಆಗಬೇಕಾಗಿದೆ.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com