ಶಿವಮೊಗ್ಗ: ಬೈಕ್ ಗೆ 407 ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರೋ ಘಟನೆ ಬೆಲವಂತಕೊಪ್ಪದ ವಿಜಯ ರೈಸ್ ಮಿಲ್ ಬಳಿ ನಡೆದಿದೆ. ರಾಮಚಂದ್ರಪ್ಪ(42), ಮಕ್ಕಳಾದ ಶಶಾಂಕ್(10), ಆದರ್ಶ (06 ) ಮೃತಪಟ್ಟವರು. ಪತ್ನಿ ಭಾಗ್ಯ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಾರೆ.
ಗುಂಜನೂರಿನಿಂದ ಚಿಕ್ಕಜಂಬೂರಿಗೆ ಊರಿನಲ್ಲಿ ದೀಪಾವಳಿ ಹಬ್ಬದ ನಿಮಿತ್ತ, ಬೈಕ್ ನಲ್ಲಿ ನಾಲ್ವರು ತೆರಳುತ್ತಿದ್ದರು ಎನ್ನಲಾಗಿದೆ. ಇವರ ಬೈಕಿಗೆ 407 ವಾಹನವೊಂದು ಬೆಲವಂತಕೊಪ್ಪದ ವಿಜಯ ರೈಸ್ ಮಿಲ್ ಬಳಿ ಡಿಕ್ಕಿಯಾದ ಪರಿಣಾಮ ಬೈಕ್ ಚಲಾಯಿಸುತ್ತಿದ್ದಂತ ರಾಮಚಂದ್ರಪ್ಪ ಹಾಗೂ ಅವರ ಪುತ್ರ ಆದರ್ಶ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತಾಯಿ ಭಾಗ್ಯ ಹಾಗೂ ಮಗ ಶಶಾಂಕ್ ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಶಶಾಂಕ್ ಸಾವನ್ನಪ್ಪಿದ್ದಾನೆ. ತೀವ್ರವಾಗಿ ಗಾಯಗೊಂಡ ಭಾಗ್ಯ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Advertisement. Scroll to continue reading.