ವಂಡ್ಸೆ : ತೀರಾ ಹದಗೆಟ್ಟಿದೆ ಕಾನಮ್ಮ ದುರ್ಗಾಪರಮೇಶ್ವರಿ ಮತ್ತು ಅಡಿಕೆಕೋಡ್ಲು ಸಂಧಿಸುವ ರಸ್ತೆ
Published
2
ಕುಂದಾಪುರ : ವಂಡ್ಸೆ ಮುಖ್ಯರಸ್ತೆ ಅನತಿ ದೂರದಲ್ಲಿರುವ ಕಾನಮ್ಮ ದುರ್ಗಾಪರಮೇಶ್ವರಿ ಮತ್ತು ಅಡಿಕೆಕೋಡ್ಲು ಸಂಧಿಸುವ ರಸ್ತೆ ತೀರಾ ಹದಗೆಟ್ಟಿದೆ. ಇಲ್ಲಿ ಸುಮಾರು 50 ಕ್ಕೂ ಅಧಿಕ ಮನೆಗಳಿದ್ದು, ರಸ್ತೆಗಳು ಸುಮಾರು 10 ವರ್ಷಗಳಿಂದ ಇದೆ ರೀತಿ ಇರುವುದು ದುರಂತವೇ ಸರಿ.
ಸುಮಾರು ವಾಹನ ಸವಾರರು ಪ್ರತಿನಿತ್ಯ ಸರ್ಕಸ್ ಮಾಡುತ್ತಾ ಪ್ರಯಾಣಿಸುತ್ತಾರೆ. ಇಲ್ಲಿನ ಮಹಿಳೆಯರು ಹಾಲು ಕೊಡಲು ಡೈರಿಗೆ ಹೋಗುವ ಮಹಿಳೆಯರಿಗೂ ಸಮಸ್ಯೆಯಾಗುತ್ತಿದೆ. ಶಾಲೆಗೆ ಮಕ್ಕಳು ಇದೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಾರೆ. ಆಟೋ ಚಾಲಕರು ಬಾಡಿಗೆ ಬರಲು ಹಿಂದೇಟು ಹಾಕುತ್ತಾರೆ. ಈ ರಸ್ತೆಗಳಿಗೆ ಕೆಲವರು ತಮ್ಮ ಸ್ವಂತ ಜಾಗವನ್ನು ರಸ್ತೆಗಳಿಗೆ ಬಿಟ್ಟು ಕೊಟ್ಟಿದ್ದಾರೆ. ಆದರೆ, ರಸ್ತೆ ಮಾತ್ರ ದುಸ್ಥಿತಿಯಲ್ಲಿದೆ ಎಂಬುದು ಗ್ರಾಮಸ್ಥರ ಅಳಲಾಗಿದೆ. ಶೀಘ್ರವೇ ರಸ್ತೆ ದುರಸ್ಥಿಗೊಳಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.