ಅಂತಾರಾಷ್ಟ್ರೀಯ

ಲೇಖನ : ಸಮಾಜ ಸೇವೆಗೆ ಇನ್ನೊಂದು ಹೆಸರು ಮೊಹಮ್ಮದ್ ಸಮೀರ್

3

ಲೇಖಕ : ಆರ್ ಜೆ ಎರಾಲ್

ನಮ್ಮ ನಡುವೆ ಅನೇಕ ವ್ಯಕ್ತಿಗಳು ಇರುತ್ತಾರೆ. ಅಸಮಾನ್ಯರಾದರೂ ಸಾಮಾನ್ಯರೊಂದಿಗೆ ಸಾಮಾನ್ಯರಾಗಿ ಬೆರೆತು, ಎಲ್ಲರ ಖುಷಿಯೊಂದಿಗೆ ಬೆರೆತು ಖುಷಿ ಪಡುತ್ತಾ…ನೋವು – ನಲಿವೊಂದಿಗೆ ಸದಾ ಜೊತೆ ನೀಡುತ್ತಾ…ಅಂತಹ ವ್ಯಕ್ತಿಗಳಲ್ಲಿ ಸಮೀರ್ ಕೂಡಾ ಒಬ್ಬರು.
ತಮ್ಮ ಬಗ್ಗೆ ಹೆಚ್ಚೇನು ಹೇಳಿಕೊಳ್ಳದ ಇವರು, ಅನೇಕರಿಗೆ ಸಹಾಯ ಮಾಡುತ್ತಾ, ಇತರರನ್ನು ಪ್ರಶಂಸಿಸುತ್ತಾ, ಪ್ರೋತ್ಸಾಹಿಸುತ್ತಾ ಸಾಗುತ್ತಿದ್ದಾರೆ.
ಇವರ ಬಗ್ಗೆ ತಿಳಿದುಕೊಳ್ಳಲು ಹೊರಟಾಗ ಆಶ್ಚರ್ಯಕರ ಸಂಗತಿಗಳು ಹೊರಬೀಳುತ್ತವೆ. ಈ ಲೇಖನದಲ್ಲಿ ಅವರ ಒಂದಷ್ಟು ವಿಚಾರಗಳನ್ನು ಬಿತ್ತರಿಸುವ ಪ್ರಯತ್ನ ಮಾಡಲಾಗಿದೆ.

ದುಬೈನಲ್ಲಿದ್ದರೂ ಊರಿಗಾಗಿ ಮಿಡಿವ ಜೀವ :

Advertisement. Scroll to continue reading.

ಮೊಹಮ್ಮದ್ ಸಮೀರ್ ಮೂಲತಃ ಉಡುಪಿ ಜಿಲ್ಲೆಯ ಉದ್ಯಾವರದವರು. ಕಳೆದ 15 ವರ್ಷಗಳಿಂದ ದುಬೈನಲ್ಲಿದ್ದಾರೆ. ಹಾಗಂತ ಊರನ್ನು ಮರೆತಿಲ್ಲ ಅವರು. ಊರ ಮಂದಿಯ ಕಷ್ಟಕ್ಕೆ ಮಿಡಿವ ಜೀವ ಅವರದ್ದು. ಊರಿನ ಸಮಾನಮನಸ್ಕರ ಜೊತೆ ಸೇರಿಕೊಂಡು ಬಡ ಮಕ್ಕಳ ಶಿಕ್ಷಣ, ಆರೋಗ್ಯ, ಜೊತೆಗೆ ಉದ್ಯೋಗ ದೊರಕಿಸಿಕೊಡಲು ತಮ್ಮಿಂದಾದ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ದುಬೈಗೆ ಬರುವ ಊರಿನ ವ್ಯಕ್ತಿಗಳನ್ನು ಆದರದಿಂದ ಬರಮಾಡಿಕೊಂಡು ಕುಟುಂಬದ ಒಬ್ಬ ಅಣ್ಣನಂತೆ ಸಹಾಯ ಮಾಡುತ್ತಾ, ಅವರ ನೋವು, ನಲಿವಿಗೆ ಸ್ಪಂದಿಸುತ್ತಾರೆ ಸಮೀರ್.
ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೂಲದ ವ್ಯಕ್ತಿಯೊಬ್ಬರು ದುಬೈನ ಹಾಸ್ಪಿಟಲ್ ಗೆ ದಾಖಲಾಗಿದ್ದರು.
ಆ ವ್ಯಕ್ತಿಯ ಕುಟುಂಬದವರು ಭಾರತದಲ್ಲಿ ಇದ್ದ ಕಾರಣ ಅವರಿಗೆ ಅ ವ್ಯಕ್ತಿಯ ಆರೋಗ್ಯದ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಆ ಸಂದರ್ಭದಲ್ಲಿ ಆಪತ್ಬಾಂಧವನಾಗಿದ್ದು, ಸಮೀರ್. ಹೌದು, ಆ ಕುಟುಂಬಕ್ಕೆ ಸಮೀರ್ ಸಂಪರ್ಕ ಸಿಕ್ಕಿತು. ಅವರು ಸಮೀರ್ ಬಳಿ ವಿನಂತಿಸಿದರು. ಹೇಳಿ ಕೇಳಿ ಸಮೀರ್ ಸಂಕಷ್ಟದಲ್ಲಿರುವ ಜೀವಗಳಿಗೆ ಆಸರೆಯಾಗುವ ಜೀವ. ರಾತ್ರಿ ಹೊತ್ತಲ್ಲಿಯೇ ಹಾಸ್ಪಿಟಲ್ ಸಂಪರ್ಕಿಸಿ ಅಲ್ಲಿನ ವೈದ್ಯರೊಂದಿಗೆ ಮಾತನಾಡಿ, ಆ ವ್ಯಕ್ತಿಯ ಸಂಪರ್ಕವನ್ನು ತನ್ನ ಕುಟುಂಬದೊಂದಿಗೆ ಮಾಡಿಸಿದರು.
ತನಗೆ ಪರಿಚಯವೇ ಇಲ್ಲದ ವ್ಯಕ್ತಿಯ ಬಗ್ಗೆ, ಕುಟುಂಬದ ಬಗ್ಗೆ, ಸಮೀರ್ ತೋರಿದ ಪ್ರೀತಿ, ಕಾಳಜಿ ಅವರ ಪರೋಪಕಾರಿ ಮನೋಭಾವಕ್ಕೆ ಉತ್ತಮ ನಿದರ್ಶನ.

ಸರಳ ವ್ಯಕ್ತಿತ್ವ, ಉತ್ತಮ ಕ್ರಿಕೆಟರ್:

ಈಗಾಗಲೇ ಹೇಳಿದಂತೆ ಸಮೀರ್ ಸರಳ ವ್ಯಕ್ತಿ. ಕ್ರಿಕೆಟ್ ಪಟು ಕೂಡಾ. ಗಲ್ಫ್ ರಾಷ್ಟ್ರದ ಅನೇಕ ಟೂರ್ನಮೆಂಟ್ ಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಫಿಟ್ ನೆಸ್ ಬಗ್ಗೆ ಕಾಳಜಿ ಹೊಂದಿರುವ ಇವರು ದಿನದಲ್ಲಿ 2 ಗಂಟೆ ವ್ಯಾಯಾಮಕ್ಕೆ ಮೀಸಲಿಟ್ಟಿದ್ದಾರೆ. ಇವರ ಯಶಸ್ಸಿನಲ್ಲಿ ಇವರ ಪತ್ನಿ, ಮಕ್ಕಳು ಹಾಗೂ ಕುಟುಂಬದ ಪಾತ್ರವೂ ದೊಡ್ಡದು.
ಅನೇಕ ಸಾಧನೆಗಳನ್ನು ಮಾಡಿದರೂ ಏನೂ ಮಾಡಿಲ್ಲ ಎಂಬಂತೆ, ಕಪ್ಪು ಕೂಲಿಂಗ್ ಗ್ಲಾಸ್ ಧರಿಸಿ ನಗು ನಗುತ್ತಾ ಲಾಂಗ್ ಡ್ರೈವ್ ಹೋಗುವ ಸಮೀರ್ ಅವರಿಗೆ ಶುಭವಾಗಲಿ…

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com