ನವದೆಹಲಿ : ಸೇನಾ ಹೆಲಿಕಾಪ್ಟರ್ ದುರಂತಕ್ಕೀಡಾದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸಂಜೆ 6.30ಕ್ಕೆ ತಮ್ಮ ಅಧಿಕೃತ ನಿವಾಸದಲ್ಲಿ ತುರ್ ಭದ್ರತೆ ಕುರಿತ ಸಂಪುಟ ಸಮಿತಿ ಸಭೆ ಕರೆದಿದ್ದಾರೆ.
ವರದಿಗಳ ಪ್ರಕಾರ, 14 ಸಿಬ್ಬಂದಿಗಳನ್ನ ಹೊತ್ತೊಯ್ಯುತ್ತಿದ್ದ ಸೇನಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, 13 ಸಿಬ್ಬಂದಿ ಮೃತ ಪಟ್ಟಿದ್ದಾರೆ.
ಅಪಘಾತಕ್ಕೀಡಾದ ಚಾಪರ್ʼನಲ್ಲಿದ್ದ ಜನರಲ್ ರಾವತ್ ಅವರ ಸಿಬ್ಬಂದಿಯ ಹೆಸರುಗಳ ಪಟ್ಟಿಯನ್ನು ಭಾರತೀಯ ವಾಯುಪಡೆ ಬಿಡುಗಡೆ ಮಾಡಿದ್ದು, ಸಿಡಿಎಸ್ ಜನರಲ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್. ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಎನ್. ಕೆ ಗುರ್ಸೆವಾಕ್ ಸಿಂಗ್, ಎನ್. ಕೆ ಜಿತೇಂದ್ರ ಕುಮಾರ್, ಎಲ್/ಎನ್ ಕೆ. ವಿವೇಕ್ ಕುಮಾರ್, ಎಲ್/ಎನ್ ಕೆ. ಬಿ ಸಾಯಿ ತೇಜ ಮತ್ತು ಹಾವ್ ಸಾತ್ಪಾಲ್ ಅವರು ಮಧ್ಯಾಹ್ನ 12:20ರ ಸುಮಾರಿಗೆ ನೀಲಗಿರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿದ್ದವರಲ್ಲಿ ಸೇರಿದ್ದಾರೆ.
Advertisement. Scroll to continue reading.