ರಾಷ್ಟ್ರೀಯ

ಕಾಶಿ ಕಾರಿಡಾರ್ ಉದ್ಘಾಟನೆ; ಕನ್ನಡ ಗ್ರಂಥ ಉಲ್ಲೇಖಿಸಿದ ಪ್ರಧಾನಿ ಮೋದಿ

1

ವಾರಣಾಸಿ : ಕಾಶಿಯ ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮನಿದ್ದಾನೆ. ಶಿವನ ಆಶೀರ್ವಾದವಿಲ್ಲದೇ ಯಾವುದೂ ಸಾಧ್ಯವಿಲ್ಲ. ಪುಣ್ಯಭೂಮಿ ಕಾಶಿಯು ಅಹಿಂಸೆಯ ಸಂಕೇತ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

” ದಿವ್ಯ ಕಾಶಿ,ಭವ್ಯ ಕಾಶಿ ” ಮೋದಿ ಕನಸಿನ ಕಾಶಿ ವಿಶ್ವನಾಥ ಕಾರಿಡಾರ್‌ ಉದ್ಘಾಟಿಸಿ ಅವರು ಮಾತನಾಡಿದರು. ಕಾಶಿ ಕಾರಿಡಾರ್‌ ಯೋಜನೆ ಕಾರ್ಮಿಕರಿಗೆ ಆಭಿನಂದನೆ. ಕೋವಿಡ್ 19 ಸಮಯದಲ್ಲಿಯೂ ಕೆಲಸ ಇಲ್ಲಿಗೆ ನಿಂತಿಲ್ಲ. ಇಂದು, ಈ ಭವ್ಯ ಸಂಕೀರ್ಣದ ನಿರ್ಮಾಣಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಕಾರ್ಮಿಕರಿಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಕಾರ್ಮಿಕರನ್ನು ಅಭಿನಂದಿಸಿದರು.

ಕನ್ನಡ ಗ್ರಂಥದ ಉಲ್ಲೇಖ :

Advertisement. Scroll to continue reading.

ಕಾಶಿ ಅಭಿವೃದ್ಧಿ ಯೋಜನೆಗೆ ಯಾವುದೇ ಅಡೆತಡೆ ಆಗಿಲ್ಲ. ಈ ಕಾಶಿಯಲ್ಲಿ ಮೃತ್ಯವೂ ಮಂಗಳವಾಗಿರುತ್ತೆ. ಇನ್ನು ಕಾಶಿ ವಿಶ್ವನಾಥ ಪಾಪಗಳ ನಿವಾರಣೆ ಮಾಡ್ತಾನೆ. ಕನ್ನಡದ ಪುರಾತನ ಗ್ರಂಥವೊಂದರಲ್ಲಿ ಇದರ ಉಲ್ಲೇಖವಿದೆ. ಇನ್ನು ಮಧ್ವಾಚಾರ್ಯರು ತಮ್ಮ ಶಿಷ್ಯರಿಗೆ ಈ ಬಗ್ಗೆ ಹೇಳಿದ್ದಾರೆ. ಕಾಶಿಯ ವೈಭವ ಮತ್ತು ಮಹಿಮೆ ಬಗ್ಗೆಯೂ ಅವರು ಹೇಳಿದ್ದಾರೆ. ಹಾಗಾಗಿ ಪುರಾತನ ಕಾಲದ ಈ ಭಾವನೆ ಈಗಲೂ ಮುಂದುವರೆದಿದೆ ಎಂದರು.

ಮಹಾದೇವನ ಇಚ್ಛೆಯ ವಿನಃ ಏನೂ ನಡೆಯುವುದಿಲ್ಲ. ಕಾಶಿಯ ಪ್ರತಿಯೊಂದು ಕಲ್ಲು ಈಶ್ವರನ ಪ್ರತಿರೂಪವಾಗಿದೆ. ಕಾಶಿಯಲ್ಲಿ ಪ್ರತಿ ಜೀವಿಯಲ್ಲೂ ದೇವರ ದರ್ಶನವಾಗುತ್ತೆ. ಇನ್ನು ಕಾಶಿ ನಾಲ್ವರು ಜೈನ ತೀರ್ಥಂಕರರ ಜನ್ಮಭೂಮಿಯಾಗಿದೆ. ಈ ಕಾಶಿ ಪ್ರವಾಸ ಜೀವನದ ಒಂದು ಭಾಗ ಎಂದರು.

ಗಂಗೆಯಲ್ಲಿ ಮಿಂದ ಪ್ರಧಾನಿ ಮೋದಿ

ಔರಂಗಜೇಬ್‌ ಕಾಶಿ ಮೇಲೆ ದಾಳಿ ಮಾಡಿ ವಿಘ್ನ ಮಾಡಿದ್ದ. ಮಹಾರಾಷ್ಟ್ರದ ಅಹಲ್ಯಾಬಾಯಿ ಹೋಲ್ಕರ್‌ ಪುನರ್‌ನಿರ್ಮಾಣ ಮಾಡಿದ್ರು. ಇಂದು ಇಡೀ ವಿಶ್ವ ಕಾಶಿಯೊಂದಿಗೆ ಸಂಪರ್ಕ ಹೊಂದಿದೆ. ಕಾಶಿಯಲ್ಲಿ ಶತಮಾನಗಳ ಪರಂಪರೆ ಮುಂದುವರೆದಿದೆ. ಹಿಂದಿನ ಕಾಶಿಗಾಗಿ ಏನು ಮಾಡಿರಲಿಲ್ಲ ಎಂದರು. ಇನ್ನು ಇದೇ ವೇಳೆ ಮಧ್ವಾಚಾರ್ಯರ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.

ಕಾರ್ಮಿಕರೊಂದಿಗೆ ಉಪಹಾರ ಸೇವನೆ

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com