ರಾಜ್ಯ

ಎಂಇಎಸ್ ಪುಂಡಾಟಿಕೆ ಖಂಡಿಸಿ ಡಿ. 31 ರಂದು ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಘೋಷಣೆ

2

ಬೆಂಗಳೂರು : ಎಂಇಎಸ್ ಪುಂಡಾಟಿಕೆ ಖಂಡಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಬಂದ್ ನಡೆಯಲಿದೆ.

ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿ, ಕನ್ನಡ ಬಾವುಟ ಹಾನಿಗೊಳಿಸಿ ಎಂಇ ಎಸ್ ಪುಂಡಾಡಿಕೆ ಮೆರೆದಿತ್ತು. ಮತ್ತೆ ಈ ಘಟನೆ ಪುನರಾವರ್ತನೆ ಅಗುತ್ತಿದ್ದು, ಇದನ್ನು ಖಂಡಿಸಿ, ಎಂಇಎಸ್ ಸಂಘಟನೆ ನಿಷೇಧಿಸಲು ಆಗ್ರಹಿಸಿ ಬಂದ್ ಗೆ ಕರೆ ನೀಡಲಾಗಿದೆ.

ರಾಜ್ಯದಲ್ಲಿ ಸರ್ಕಾರ ಇದ್ಯಾ.? ಪೊಲೀಸರು ಇದ್ದಾರಾ.? ಇದ್ರೇ ಏನ್ ಮಾಡ್ತಾ ಇದೆ. ಬೆಳಗಾವಿಯಲ್ಲಿ ಜನಪ್ರತಿನಿಧಿಗಳು ಇದ್ದರೇ ಅವರು ಮರಾಠಿಗರ ಗುಲಾಮರಾಗಿದ್ದಾರೆ. ಬೆಳಗಾವಿಯಲ್ಲಿರುವಂತ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಅಭಿನಂದಿಸೋದಾಗಿಯೂ ತಿಳಿಸಿದರು.

Advertisement. Scroll to continue reading.

ಬೆಳಗಾವಿಯಲ್ಲಿ ನಮ್ಮ ಕಣ್ಮುಂದೆಯೇ ಕನ್ನಡ ಭಾವುಟಕ್ಕೆ ಬೆಂಕಿ ಇಟ್ಟಿದ್ದಾರೆ. ಇದು ಕನ್ನಡಿಗರಿಗೆ, ಕನ್ನಡ ಭಾಷೆಗೆ ಬೆಂಕಿ ಇಟ್ಟಂತೆ. ಇದನ್ನು ನಾವು ಸಹಿಸೋದಿಲ್ಲ. ಉದ್ಧವ್ ಠಾಕ್ರೆ ರಾಜ್ಯದಲ್ಲಿ ಬಾಲ ಬಿಚ್ಚುವಂತಿಲ್ಲ. ಮಹಾರಾಷ್ಟ್ರದಲ್ಲಿ ಇವರು ಬಾಲ ಬಿಚ್ಚಲಿ. ರಾಜ್ಯದಲ್ಲಿ ಎಂಇಎಸ್ ಪುಂಡಾಟದ ವಿರುದ್ಧ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಇಳಿಯಲಿವೆ. ಅದಕ್ಕೂ ಮುನ್ನಾ ಸಿಎಂ ಎಚ್ಚೆತ್ತುಕೊಳ್ಳಬೇಕು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

35 ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಬಂದ್ ಇರಲಿದೆ ಎಂದರು.

ಇಡೀ ಕರ್ನಾಟಕವೇ ಬಂದ್ ಗೆ ಸಿದ್ಧವಾಗಿದೆ. ಇದು ಕನ್ನಡಿಗರ ಬಂದ್. ಇದು ವಿಫಲವಾಗಲಿದೆ. ಇದು ಎಲ್ಲಾ ರೀತಿಯಲ್ಲೂ ಬೆಳಗಬೇಕು ಎಂದಿದ್ದಾರೆ.

ಮುಖ್ಯಮಂತ್ರಿಯವರೇ ಗಂಭೀರವಾದ ನಿರ್ಧಾರವನ್ನು ಎಂಇಎಸ್ ಬಗ್ಗೆ ತೆಗೆದುಕೊಳ್ಳಿ. ಡಿಸೆಂಬರ್ 31ರ ಒಳಗಾಗಿ ರಾಜ್ಯ ಸರ್ಕಾರ ಎಂಇಎಸ್ ನಿಷೇಧಿಸುವಂತ ನಿರ್ಧಾರವನ್ನು ತೆಗೆದುಕೊಂಡರೆ, ಡಿಸೆಂಬರ್ 31 ರಂದು ಕರೆ ನೀಡಲಾಗಿರು ಕರ್ನಾಟಕ ಬಂದ್ ವಾಪಾಸ್ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com