ಬ್ರಹ್ಮಾವರ : ನಿರ್ದೇಶಕ ಕೃಷ್ಣಪ್ಪ ಉಪ್ಪೂರು ನಿರ್ದೇಶನದ ಗುರ್ಬಿ ಚಿತ್ರ ಬಿಡುಗಡೆ
Published
2
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬುಡಕಟ್ಟು ಜನಾಂಗದ ಕುರಿತು ಆಳವಾಗಿ ಅಧ್ಯಯನ ಮಾಡಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ನಿರ್ದೇಶಕ ಕೃಷ್ಣಪ್ಪ ಉಪ್ಪೂರು ನಿರ್ದೇಶನದ ಕನ್ನಡ ಚಲನ ಚಿತ್ರ ಗುರ್ಬಿ ಇಂದಿಗೂ ಕೆಲವು ಭಾಗದಲ್ಲಿ ಕಂಡುಬರುವ ಶೋಷಣೆ ಮತ್ತು ಜನಪದ ಕಟ್ಟುಪಾಡುಗಳನ್ನು ಚಲನ ಚಿತ್ರದ ಮೂಲಕ ಬಿಂಬಿಸಿದ್ದಾರೆ ಎಂದು ಇಂದ್ರಾಳಿ ಜಯಕರ ಶೆಟ್ಟಿ ಹೇಳಿದರು. ಶುಕ್ರವಾರ ರಾಜ್ಯದಾದ್ಯಂತ 13 ಕೇಂದ್ರದಲ್ಲಿ ಬಿಡುಗಡೆಗೊಂಡ ಚಿತ್ರ ಗುರ್ಬಿಯನ್ನು ಉಡುಪಿ ಆಶೀರ್ವಾದ ಚಿತ್ರ ಮಂದಿರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, 2 ವರ್ಷದಿಂದ ಆರ್ಥಿಕ ಸಂಕಷ್ಟದ ನಡುವೆಯೂ ಚಿತ್ರ ನಿರ್ಮಿಸಿ ಕಲೆಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದರು.
ಕರ್ನಾಟಕ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್ , ಜೀವನ್ ರಾಮ್ ಸುಳ್ಯ , ಉದ್ಯಮಿ ವಿಶ್ವನಾಥ್ ಶಣೈ , ಬಾಸುಮ ಕೊಡಗು ಚಿತ್ರದ ನಿರ್ಮಾಪಕಿ ಮೀರಾ ಕೆ. ಉಪ್ಪೂರು ಉಪಸ್ಥಿತರಿದ್ದರು.
ನಿರ್ದೇಶಕ ಕೃಷ್ಣಪ್ಪ ಉಪ್ಪೂರು ಸ್ವಾಗತಿಸಿ , ರವಿರಾಜ್ ಉಡುಪಿ ನಿರೂಪಿಸಿದರು.
ಬಹುತೇಕ ನಟರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಅನೇಕರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.