ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ದೈವದ ಗುಡಿಯ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಟ್ರಾನ್ಸ್ ಫಾರಂಗೆ ತಾಗಿ ವಿದ್ಯುತ್ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಾಡ್ಪಾಲು ಸೋಮೇಶ್ವರದಲ್ಲಿ ನಡೆದಿದೆ. ರವಿ ಪೂಜಾರಿ(38) ಮೃತ ವ್ಯಕ್ತಿ. ರವಿ ದೈವದ ಗುಡಿಯ ಎಡಬದಿಯ ಹಿಂದಿನ ಕಬ್ಬಿಣದ ಗುಜಿ ತೆಗೆಯಲು ಕೆಳಗೆ ನಿಂತು ಕೈಯಿಂದ ಹಿಡಿದು ರಭಸವಾಗಿ ಎಳೆದಿದ್ದಾರೆ. ಈ ವೇಳೆ ಕಬ್ಬಿಣದ ಗುಜಿ ಅವರ ನಿಯಂತ್ರಣ ತಪ್ಪಿ ವಾಲಿ ದೈವದ ಗುಡಿ ಬಳಿಯಿದ್ದ 11 ಕೆ.ವಿ. ಟ್ರಾನ್ಸ್ ಫಾರಂಗೆ ತಾಗಿದೆ. ಪರಿಣಾಮ ಕಬ್ಬಿಣದ ಗುಜಿಯ ಮೂಲಕ ರವಿ ಪೂಜಾರಿ ಅವರ ಮೈ ಮೇಲೆ ಹರಿದು ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಅವರನ್ನು ಆಸ್ಪತ್ರೆಗೆ ಸಾಗಿಸಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Advertisement. Scroll to continue reading.
ದೈವದ ಗುಡಿಯ ಕೆಲಸ ಮಾಡಿಸುವ ವಿ.ಆರ್.ಪೈ ಮತ್ತು ಸೆಂಟ್ರಿಂಗ್ ಕೆಲಸ ಮಾಡಿಸುವ ಮಹೇಶ್ ಪೂಜಾರಿ ಕೆಲಸಗಾರರ ಸುರಕ್ಷತೆಯ ಕುರಿತು ಮುಂಜಾಗೃತಾ ಕ್ರಮ ಕೈಗೊಳ್ಳದೇ, ಕೆಲಸಗಾರರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.