ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ನದಿಗೆ ಅಕಸ್ಮಿಕ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಗುಳಿಬೆಟ್ಟು ಏಳಾಲಿ ಎಂಬಲ್ಲಿ
ಸ್ಥಳೀಯ ನಿವಾಸಿ ಕೃಷಿಕ ಮಹಾಬಲ ಪೂಜಾರಿ (65) ಮೃತಪಟ್ಟವರು.
ಇವರು ಮಂಗಳವಾರ ಮಧ್ಯಾಹ್ನ ತೋಟದ ಕೆಲಸ ಮುಗಿಸಿ ಪಕ್ಕದಲ್ಲಿರುವ ಮೂರು ಮುಡಿ ನದಿಯ ಡ್ಯಾಮ ಬಳಿ ಕಾಲು ತೊಳೆಯಲು ನೀರಿಗೆ ಇಳಿದಾಗ ಅಕಸ್ಮಿಕ ಕಾಲುಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗಮಿಸಿದ ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ.ಎಂ ಹಾಗೂ ಸಿಬ್ಬಂದಿ ಮತ್ತು ಹೆಬ್ರಿ ಗ್ರಾಮ ಪಂ ಉಪಾಧ್ಯಕ್ಷ ಗಣೇಶ ಕುಮಾರ್ ಸ್ಥಳೀಯ ಯುವಕರ ಸಹಾಯದಿಂದ ನದಿಯಲ್ಲಿ ಮುಳುಗಿದ ಶವವನ್ನು ಮೇಲಕ್ಕೆ ಎತ್ತಲಾಯಿತು.
Advertisement. Scroll to continue reading.
ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.