ಕರಾವಳಿ

ಹೆಬ್ರಿ : ಹಿಂದೂ ರಕ್ಷಕರ ಸರ್ಕಾರದಿಂದ ಹಿಂದೂಗಳ ಮೇಲೆಯೇ ಹಲ್ಲೆ : ಮಂಜುನಾಥ ಪೂಜಾರಿ ಆಕ್ರೋಶ

3

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಹಿಂದೂ ರಕ್ಷಕರೆಂದು ಸರ್ಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದ ಅಧಿಕಾರಿಗಳಿಂದಲೇ ಕೋಟದಲ್ಲಿ ಹಿಂದೂಗಳಾದ ಕೊರಗ ಸಮುದಾಯದವರ ಮೇಲೆ ಹಲ್ಲೆ ನಡೆದಿದೆ. ಅವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಹೆಬ್ರಿಯ ಚೈತನ್ಯ ಯುವ ವೃಂದದಲ್ಲಿ ಮಂಗಳವಾರ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಸದಸ್ಯತ್ವ ನೊಂದಾವಣೆಯ ಡಿಜಿಟಲ್‌ ಅಭಿಯಾನದ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement. Scroll to continue reading.

ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದಿಂದ ಜನತೆ ದಿವಾಳಿಯಾಗಿದ್ದಾರೆ. ಬದುಕುವುದೇ ಕಷ್ಟವಾಗಿದೆ. ಬಹುತೇಕ ಉದ್ಯಮಗಳು ಬಂದ್‌ ಆಗಿ ನೌಕರರು ಬೀದಿಗೆ ಬಂದಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿದರೆ ಕಾಂಗ್ರೆಸ್‌ ಎಲ್ಲಡೆಯು ಅಧಿಕಾರಕ್ಕೆ ಬರುತ್ತದೆ. ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಬಲವಾಗಿಯೇ ಇದೇ, ಕಾರ್ಯಕರ್ತರು ಮುಖಂಡರು, ನಾಯಕರು ಎಲ್ಲರೂ ಸೇರಿ ಒಂದಾಗಿ ಕೆಲಸ ಮಾಡಿದರೇ ಗೆಲವು ನಮ್ಮದಾಗಲಿದೆ ಎಂದು ವಹಿಸಿ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಕುಮಾರ್‌ ಕೊಡವೂರು ಮಾತನಾಡಿ, ಕಾಂಗ್ರೆಸ್‌ ಪಕ್ಷದ ಸದಸ್ಯರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಎಲ್ಲರೂ ಸೇರಿ ಬೆಳೆಸಿ ಮುನ್ನಡೆಸಬೇಕಾಗಿದೆ. ಈಗ ಒಂದು ಬೂತಿನಲ್ಲಿ ಕನಿಷ್ಠ ೨೫ ಸದಸ್ಯರನ್ನು ಸೇರಿಸುವ ಮೂಲಕ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಸದಸ್ಯರಾಗಬೇಕಿದೆ, ಅತೀ ಶೀಘ್ರವಾಗಿ ಸದಸ್ಯರ ನೊಂದಾವಣೆಯ ಕಾರ್ಯ ಮುಗಿಸಬೇಕು, ಜಿಲ್ಲೆಯಲ್ಲಿಯೇ ಅತ್ಯುತ್ತಮವಾಗಿ ಕೆಸಲ ಮಾಡುವ ಮೂಲಕ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಟದಲ್ಲಿ ಕೊರಗ ಸಮುದಾಯದ ಕುಟುಂಬದ ಮೇಲೆ ನಡೆದ ಹಲ್ಲೆಯಲ್ಲಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ನಾವೆಲ್ಲ ಭಾವಿಸಿದ್ದರು. ಸಮಾಜ ಕಲ್ಯಾಣ ಸಚಿವರು ಕುಟುಂಬವನ್ನು ಬೇಟಿ ಮಾಡಿದ ಬಳಿಕ ಕೊರಗ ಸಮುದಾಯದವರ ಮೇಲೆ ಪ್ರಕರಣ ದಾಖಲಾಗಿರುವುದು ವಿಪರ್ಯಾಸ. ಕಾಂಗ್ರೆಸ್‌ ಸಮುದಾಯದ ಜೊತೆಗೆ ಇದೆ ಎಂದು ಅಶೋಕ್‌ ಕುಮಾರ್‌ ಕೊಡವೂರು ಹೇಳಿದರು.

ಮೇಕೆದಾಟು ಪಾದಯಾತ್ರೆ ಉಡುಪಿ ಜಿಲ್ಲೆಯಿಂದ ೫೦೦ ಮಂದಿ:

ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಕಾಂಗ್ರೆಸ್‌ ವತಿಯಿಂದ ನಡೆಯುತ್ತಿರುವ ಪಾದಯಾತ್ರೆಗೆ ಜನವರಿ ೧೯ರಂದು ಪ್ರತಿ ಬೂತಿನಿಂದ ೫೦ ರಂತೆ ೫೦೦ ಮಂದಿ ಭಾಗವಹಿಸುತ್ತೇವೆ ಎಂದು ಅಶೋಕ್‌ ಕುಮಾರ್‌ ಕೊಡವೂರು ತಿಳಿಸಿದರು.

Advertisement. Scroll to continue reading.

ಈ ವೇಳೆ ಅತ್ಯುತ್ತಮ ಹಾಲು ಡೇರಿ ಹೆಗ್ಗಳಿಕೆ ಪಾತ್ರರಾದ ಶಿವಪುರದ ಕಾಂಗ್ರೆಸ್‌ ಮುಖಂಡರಾದ ಶಿವಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೆ. ಸುಂದರ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕಬ್ಬಿನಾಲೆ ರಂಜನಿ ಹೆಬ್ಬಾರ್‌, ಐಟಿಸೆಲ್‌ ಜಿಲ್ಲಾಧ್ಯಕ್ಷ ರೋಶನ್‌ ಶೆಟ್ಟಿ, ಯುವ ಕಾಂಗ್ರೆಸ್‌ ಅಧ್ಯಕ್ಷ ದಿನೇಶ ಶೆಟ್ಟಿ ಹುತ್ತುರ್ಕೆ, ಕೆರ್ವಾಸೆ ಪ್ರಕಾಶ ಪೂಜಾರಿ, ಗಣೇಶ್‌ ಪೂಜಾರಿ, ಜಿಲ್ಲಾ ಕಾಂಗ್ರೆಸ್ಸಿನ ಬಾಲಕೃಷ್ಣ ಪೂಜಾರಿ, ವಿವಿಧ ಪ್ರಮುಖರಾದ ಸೀತಾನದಿ ರಮೇಶ ಹೆಗ್ಡೆ, ರಾಘವ ದೇವಾಡಿಗ, ಹೆಚ್.ಬಿ.ಸುರೇಶ್‌, ಶಶಿಕಲಾ ಪೂಜಾರಿ, ಸದಾಶಿವ ದೇವಾಡಿಗ, ಪ್ರಭಾಕರ ಬಂಗೇರ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.

ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಚ್.‌ ಜನಾರ್ದನ್ ಸ್ವಾಗತಿಸಿ, ನಿರೂಪಿಸಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com