ಕರಾವಳಿ

ದಿಕ್ಸೂಚಿ ವಿಶೇಷ ವರದಿ : ಉಡುಪಿ : ನಡೆದಾಡುತ್ತಲೇ ಕಟ್ಟಿಕೊಂಡಿದ್ದಾರೆ ಸ್ವಾವಲಂಬನೆ ಬದುಕು; ಇದು 25 ವರ್ಷಗಳಿಂದ ಸಾಣೆ ಕೆಲಸ ಮಾಡುತ್ತಿರುವ ಆಂಧ್ರ ಮೂಲದ ವ್ಯಕ್ತಿ ಕಥೆ

2

ವರದಿ : ಬಿ.ಎಸ್.ಆಚಾರ್ಯ

ಸ್ವತಂತ್ರ ಪೂರ್ವದಿಂದಲೂ ಭಾರತದಲ್ಲಿ ಸ್ವಾವಲಂಬನೆ ಮತ್ತು ಸ್ವ ಉದ್ಯೋಗದಿಂದ ಜೀವನ ಕಂಡುಕೊಂಡು ಅನೇಕ ಉದ್ಯೋಗಗಳು ಬೃಹತ್ ಉದ್ಯಮವಾಗಿ ಎಲ್ಲವೂ ಯಾಂತ್ರಿಕರಣಗೊಂಡರೂ, ಇಂದಿಗೂ ಕೆಲವೊಂದು ಸ್ವ ಉದ್ಯೋಗಗಳು ಉಳಿದುಕೊಂಡು ಬದುಕು ಕಟ್ಟಿಕೊಂಡವರಲ್ಲಿ ಹಲವಾರು ಉದ್ಯೋಗಕ್ಕೆ ಬೇಕಾಗುವ ಸಲಕರಣೆಯನ್ನು ಹರಿತಗೊಳಿಸುವ ಸಾಣೆ ಕೆಲಸದವರು ಅದನ್ನೆ ನಂಬಿಕೊಂಡು ಜೀವನ ಮಾಡುತ್ತಾರೆ.

ದೂರದ ಆಂಧ್ರ ಪ್ರದೇಶದ ಕಾಳಹಸ್ತಿಯ ಅಕ್ಬರ್ ಆಲಿ 25 ವರ್ಷದಿಂದ ಉಡುಪಿ ಭಾಗದಲ್ಲಿದ್ದು ಕ್ಷೌರಿಕರ ಮತ್ತು ಟೈಲರ್ ಅಂಗಡಿ, ಹೋಟೆಲ್ ಕೋಳಿ ಅಂಗಡಿಗೆ ಹೋಗಿ ಕತ್ತರಿ ಸಾಣೆ ಮಾಡಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ .
ಆಂಧ್ರದ ಅವರ ಊರಿನಲ್ಲಿ ಮರದ ಕೆಲಸ ಮಾಡುವ ವಿಶ್ವಕರ್ಮರಿಂದ 3000 ರೂಪಾಯಿ ವೆಚ್ಚದಲ್ಲಿ ಬೈಸಿಕಲ್ ಚಕ್ರ ಮತ್ತು ಅದರ ಚೈನ್ ನಿಂದ ಮಾಡಿಸಿಕೊಂಡ 10 ಕೆಜಿ ತೂಕದ ಮರದ ಸಲಕರಣೆಗೆ ಸಾಣೆಕಲ್ಲು ಬಳಸಿದ ಯಂತ್ರ ಅವರ ಬದುಕಿನ ಬಂಡಿಯಾಗಿದೆ.

Advertisement. Scroll to continue reading.


ಶುಕ್ರವಾರ ಹೊರತಾಗಿ ವಾರದಲ್ಲಿ 6 ದಿನ ಬ್ರಹ್ಮಾವರ , ಮಲ್ಪೆ , ಕಲ್ಯಾಣಪುರ ಉಡುಪಿ ಸೇರಿದಂತೆ ಪ್ರತೀದಿನ ಅವರು ಕನಿಷ್ಟ 8 ಕಿಮಿ ನಡೆದಾಡಿಕೊಂಡು ಅವರ ಜೀವನ ಚಕ್ರ ಸಾಗುತ್ತದೆ. ಬೀಡಿ ಕತ್ತರಿಗೆ 20 ರೂ. ಟೈಲರ್ ಮತ್ತು ಸೆಲೂನಿನ ಕತ್ತರಿಗೆ 30 ರೂ ಕತ್ತಿಗಳಿಗೆ 40 ರೂ ಇವರ ಕೂಲಿ. ಕೆಲವೊಂದು ದಿನ 600 ರಿಂದ 700 ದಿನದ ಗಳಿಕೆಯಾಗುತ್ತದೆ.

ವರ್ಷದಲ್ಲಿ 10 ತಿಂಗಳು ಉಡುಪಿಯಲ್ಲಿ ಬದುಕು ಕಂಡುಕೊಂಡ ಅಕ್ಬರ್ ಆಲಿ ರಂಝಾನ್ ಮಾಸದಲ್ಲಿ ಕಾಳಹಸ್ತಿಗೆ ಹೋಗುತ್ತಾರೆ. ಇವರಂತೆ ಕರಾವಳಿ ಜಿಲ್ಲೆಯಲ್ಲಿ ಬಹಳಷ್ಟು ಮಂದಿ ಇದ್ದು ಇವರ ವೃತ್ತಿ ಬದುಕು ಅಸಂಘಟಿತ ಕಾರ್ಮಿಕರಾದ ಕಾರಣ ಸರಕಾರದಿಂದ ಯಾವೂದೇ ಸಾಮಾಜಿಕ ಭದ್ರತೆ ಆಗಲಿ ಪಿಂಚಣಿಯಾಗಲಿ ಇವರಿಗಿಲ್ಲ .
ಸೌಹಾರ್ದಯುತ ಬದುಕಿನ 55 ವರ್ಷದ ಅಕ್ಬರ್ ಆಲಿ ಅವರ ಊರಿನಲ್ಲಿ ಪತ್ನಿ , ಪದವಿ ಶಿಕ್ಷಣಪಡೆಯುತ್ತಿರುವ ಮಗ ಮತ್ತು ಪಿಯು ಶಿಕ್ಷಣ ಪಡೆದ ಮಗಳು ಇದ್ದಾರೆ.

ಇಂತಹ ಅನೇಕ ಸ್ವ ಉದ್ಯೋಗಗಳು ಇಂದಿಗೂ ನಮ್ಮ ದೇಶದಲ್ಲಿ ಇದ್ದು ಜನರ ಜೀವನದೊಂದಿಗೆ ಬೆಸೆಯುವ ಇವರ ವೃತ್ತಿ ಆತ್ಮನಿರ್ಬರ ಭಾರತ ಪರಿಕಲ್ಪನೆಯಲ್ಲಿ ಇವರ ಬದುಕಿಗೆ ಭದ್ರತೆ ನೀಡಬೇಕಾಗಿದೆ.

25 ವರ್ಷದಿಂದ ಉಡುಪಿ ಪರಿಸರದಲ್ಲಿ ನಾನು ನನ್ನ ವೃತ್ತಿ ಬದುಕನ್ನ ಕಂಡುಕೊಂಡಿದ್ದೇನೆ. ವಾರದಲ್ಲಿ ಕೆಲವೊಂದು ನಿಗದಿತ ದಿನ ಕೆಲವು ಬಾರಿ ತಪ್ಪಿ ಹೋದಲ್ಲಿ ಜನರು ನಾನು ಮಾಡುವ ಕೆಲಸಕ್ಕೆ ನನಗೆ ಕರೆ ಮಾಡುತ್ತಾರೆ. ನಮ್ಮದು ನಡೆದಾಡುವ ಬದುಕು, ಜೀವ ಗಟ್ಟಿ ಇದ್ದರೆ ಜೀವನ.

ಅಕ್ಬರ್ ಆಲಿ, ಸಾಣೆ ಕಾರ್ಮಿಕ


ನಾನು ಟೈಲರ್ ಕೆಲಸ ಮಾಡುವ ದಿನದಿಂದ ಕತ್ತರಿ ಸಾಣೆ ಇವರಲ್ಲಿ ಮಾತ್ರ ಮಾಡಿಸುತ್ತೇನೆ. ಇವರ ಸಾಣೆಯ ನಾಜೂಕು ತನ ನಮ್ಮ ಕೆಲಸಕ್ಕೆ ಹೆಚ್ಚು ಸಹಕಾರಿಯಾಗುತ್ತದೆ.

Advertisement. Scroll to continue reading.
ಎಸ್. ಭವಾನಿ ಶೆಟ್ಟಿಗಾರ್ , ಟೈಲರ್, ಬ್ರಹ್ಮಾವರ


Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com