ಶಿವಮೊಗ್ಗ: ಕಳೆದ ಶುಕ್ರವಾರ ಸಂಜೆಯಂದು ನಾಪತ್ತೆಯಾಗಿದ್ದಂತ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್(54) ಅವರು ಶವವಾಗಿ ಇಂದು ಪಟಗುಪ್ಪೆ ಹೊಳೆಯ ಸಮೀಪದಲ್ಲಿ ಪತ್ತೆಯಾಗಿದ್ದಾರೆ.
ಸಾಗರದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರು ಶುಕ್ರವಾರ ಸಂಜೆ ಮನೆಯಿಂದ ತೆರಳಿದ್ದಂತವರು, ಹೊಸನಗರ ತಾಲೂಕಿನ ಪಟಗುಪ್ಪೆ ಸೇತುವೆ ಬಳಿಯಲ್ಲಿ ಕಾರು ನಿಲ್ಲಿಸಿ, ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದರು.
ಅವರಿಗಾಗಿ ಕಳೆದ ಮೂರು ದಿನಗಳಿಂದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯ ಈಜುಗಾರರು ಪಟಗುಪ್ಪೆ ಸೇತುವೆ ಕೆಳಗೆ ನೀರಿನಲ್ಲಿ ಹುಡುಕಾಟ ನಡೆಸಲಾಗುತ್ತಿತ್ತು. ಇಂದು ಬೆಳಿಗ್ಗೆ ಅವರ ಶವ ಪಟಗುಪ್ಪೆ ಹೊಳೆಯ ಸಮೀಪದಲ್ಲಿ ಪತ್ತೆಯಾಗಿದೆ. ಈ ಮೂಲಕ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಶವವಾಗಿ ಪತ್ತೆಯಾಗಿದ್ದಾರೆ.
Advertisement. Scroll to continue reading.
ಸುಮಾರು 20 ವರ್ಷಗಳಿಂದ ಪ್ರಕಾಶ್ ಬಸ್ ಟ್ರಾವೆಲ್ಸ್ ನಡೆಸುತ್ತಿದ್ದರು. ಸಾಗರ ತಾಲೂಕು ಸೇರಿದಂತೆ ಜಿಲ್ಲೆ, ಬೆಂಗಳೂರಿಗೂ ಪ್ರಕಾಶ್ ಬಸ್ ಓಡಾಡುತ್ತಿದ್ದವು. ಕಳೆದ ಲಾಕ್ ಡೌನ್ ನಂತರ ಸಂಸ್ಥೆ ನಷ್ಟ ಅನುಭವಿಸುತ್ತಿತ್ತು ಎನ್ನಲಾಗಿದೆ. ಈ ನಷ್ಟದಿಂದ ಬೇಸತ್ತು ಮಾಲೀಕ ಪ್ರಕಾಶ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ತನಿಖೆ ಮುಂದುವರೆದಿದೆ.
Advertisement. Scroll to continue reading.