ಉಡುಪಿ : ಜಿಪಿಎಲ್ ವೆಂಚರ್ ಸಂಸ್ಥೆ ನಿರ್ಮಾಣದಲ್ಲಿ ‘ಕ್ರಾಂತಿಯೋಗಿ’ ಎಂಬ ಅನಿಮೇಷನ್ ಸೀರೀಸ್ ಬಿಡುಗಡೆಗೆ ಸಿದ್ಧಗೊಂಡಿದೆ. ಇದನ್ನು ಲೋಗನಾಯಕನ್ ಕೃಷ್ಣನ್ ಹಾಗೂ ಸತ್ಯ ಪ್ರಕಾಶ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
ಮಹಾಮಾನವತಾವಾದಿ ಕ್ರಾಂತಿಯೋಗಿ ಬಸವಣ್ಣನವರ ತತ್ವಾದರ್ಶಗಳನ್ನು ಸಾರುವ ಈ ಅನಿಮೇಷನ್ ಚಿತ್ರವು ಮಕ್ಕಳಲ್ಲಿ ಬಸವಣ್ಣನವರ ಬಗ್ಗೆ ಅರಿವು ಮೂಡಿಸಲಿದೆ.
ಈ ಚಿತ್ರಕ್ಕೆ ಸುಧೀರ್ ಶಾನುಭಾಗ್ ಚಿತ್ರಕತೆ ಸಂಭಾಷಣೆ ಬರೆದಿದ್ದಾರೆ. ಮಾಸ್ಟರ್ ಡೇವಿಡ್ ತರಂಗ್ ಈ ಚಿತ್ರದ ಅನಿಮೇಷನ್ ಹೆಡ್ ಆಗಿ ಕಾರ್ಯ ನಿರ್ವಹಿದ್ದಾರೆ. ಎಡ್ಬರ್ಗ್ ದಿಲ್ಲೊನ್ ಸೊನ್ಸ್ ಅವರ ಸಂಗೀತ ನಿರ್ದೇಶನವಿದ್ದು, ಪಿಕೆಎಫ್ ಅನಿಮೇಷನ್ ಸ್ಟುಡಿಯೋದ ಪ್ರತಿಭಾವಂತ ಅನಿಮೇಟರ್ ಗಳ ತಂಡ ತಮ್ಮ ಕ್ರಿಯಾಶೀಲತೆಯನ್ನು ಮೆರೆದಿದ್ದಾರೆ.
Advertisement. Scroll to continue reading.