ಮಂಡ್ಯ: ಹುಡುಗರ ಮುಂದೆ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿಗೆ ಜಮಾತ್ ಉಲೆಮಾ-ಎ-ಹಿಂದ್ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಪ್ರಕಟಿಸಿದೆ.
ಮಂಡ್ಯ ಜಿಲ್ಲೆ ಪಿಇಎಸ್ ಕಾಲೇಜಿನಲ್ಲಿ ನಿನ್ನೆ ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿನಿಯೊಬ್ಬಳಿಗೆ ಕೇಸರಿ ಶಾಲು ಧರಿಸಿ ಬಂದಿದ್ದಂತಹ ವಿದ್ಯಾರ್ಥಿಗಳು ಅಡ್ಡಿ ಪಡಿಸಿದ್ದರು. ಆದರೂ ವಿದ್ಯಾರ್ಥಿನಿ ಹುಡುಗರ ಮುಂದೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ, ಹಿಜಾಬ್ ಧರಿಸೋದಕ್ಕಾಗಿ ಪ್ರತಿಭಟಿಸಿದ್ದರು. ಈಕೆಯ ವೀಡಿಯೋ ಎಲ್ಲೆಡೆ ವೈರಲ್ ಕೂಡ ಆಗಿತ್ತು.
ಈ ಕುರಿತಂತೆ ಟ್ವಿಟ್ ಮಾಡಿರುವ ಜಮಾತ್ ಉಲೆಮಾ-ಐ-ಹಿಂದ್ ಸಂಘಟನೆ, ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಹಿಜಾಬ್ ಗಾಗಿ ಏಕಾಂಕಿಯಾಗಿ ಹೋರಾಡಿದಂತ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್ ಗೆ ತಮ್ಮ ಸಂಘಟನೆಯಿಂದ 5 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ.
Advertisement. Scroll to continue reading.