ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಸಾಲಬಾಧೆಯಿಂದ ರೈತನೋರ್ವ ಕಾರಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಡ್ಪಾಲು ಗ್ರಾಮದಲ್ಲಿ ನಡೆದಿದೆ.
ಶೃಂಗೇರಿ ತಾಲೂಕಿನ ಗಿಣಕಲ್ ನಿವಾಸಿ ಜಿ.ಎನ್.ಲೋಕಣ್ಣ(54) ಆತ್ಮಹತ್ಯೆ ಮಾಡಿಕೊಂಡವರು.
Advertisement. Scroll to continue reading.
ಅವರು ಅಡಿಕೆ ತೋಟದ ಬಗ್ಗೆ ಬ್ಯಾಂಕ್ ಮತ್ತು ಸೊಸೈಟಿಯಲ್ಲಿ ಸಾಲವನ್ನು ಮಾಡಿದ್ದರು. ಆದರೆ, ಅಡಿಕೆ ತೋಟದ ರೋಗ ಬಾದೆಯಿಂದ ಪಸಲು ಬಾರದ ಕಾರಣ ಅವರು ನಷ್ಟವುಂಟಾಗಿ ಬ್ಯಾಂಕ್ ಮತ್ತು ಸೊಸೈಟಿಯಲ್ಲಿ ಮಾಡಿದ ಸಾಲವನ್ನು ಕಟ್ಟಲಾಗಲಿಲ್ಲ. ಹೀಗಾಗಿ ಸಾಲದ ಬಾದೆಯಿಂದ ಮನನೊಂದು ನಿನ್ನೆ ನಾಡ್ಪಾಲು ಗ್ರಾಮದ ಸೋಮೇಶ್ವರ ಘಾಟಿಯ 2 ನೇ ತಿರುವಿನ ಬಳಿ ತಾನು ಚಲಾಯಿಸಿಕೊಂಡು ಬಂದಿದ್ದ ಓಮ್ನಿ ಕಾರನ್ನು ಕಚ್ಚಾ ರಸ್ತೆಯ ಬದಿಯಲ್ಲಿ ಇರಿಸಿ ಕಾರಿನ ಹಿಂದುಗಡೆಯ ಸೀಟಿನಲ್ಲಿ ಕುಳಿತು ಕೊಂಡು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.