ಉಡುಪಿ : ತುಳು ಪಾಡ್ದಾನ ಸಮೀಕ್ಷೆ ಕನ್ನಡ ಪ್ರಬಂಧ ಸ್ಪರ್ಧೆ: ಬಜಗೋಳಿ ಸ.ಪ.ಪೂ. ಕಾಲೇಜಿನ ಪ್ರಿಯಾ ಪ್ರಥಮ
Published
2
ಉಡುಪಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ತುಳು ಪಾಡ್ದಾನ ಸಮೀಕ್ಷೆ ಕನ್ನಡ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕು. ಪ್ರಿಯಾ ಪ್ರಥಮ ಬಹುಮಾನ ( ರೂ. 2000) ಪಡೆದಿದ್ದಾರೆ.
ಕು.ಮಲ್ಲಿಕಾ
ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ .ಕಾಮ್ ವಿದ್ಯಾರ್ಥಿನಿ ಮಲ್ಲಿಕಾ ದ್ವಿತೀಯ ಬಹುಮಾನ ( ರೂ.1500) ಪಡೆದಿದ್ದಾರೆ.
ಶುಭಧರ
ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ ಕಾಮ್ ವಿದ್ಯಾರ್ಥಿ ಶುಭಧರ ತೃತೀಯ ಬಹುಮಾನ ( ರೂ. 1000) ಪಡೆದಿದ್ದಾರೆ.
ದ್ವಿತೀಯ ಸ್ಥಾನ ಪಡೆದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕು.ಮಲ್ಲಿಕಾ, ” ನನಗೆ ಪಾಡ್ದಾನ ಅಂದರೆ ಏನು ಅಂತ ಗೊತ್ತಿರಲಿಲ್ಲ. ಈ ಸ್ಪರ್ಧೆ ತುಳು ಪಾಡ್ ದನ ಗಳ ಅಧ್ಯಯನ ಕ್ಕೆ ಪ್ರೇರಣೆ ನುಡಿದೆ ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.