ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಅನಂತ ಪದ್ಮನಾಭನ ಸನ್ನಿಧಿಯಲ್ಲಿ ನಡೆಯುವ ಹೆಬ್ರಿ ಉತ್ಸವ ಅದು ಎಲ್ಲರ ಉತ್ಸವ. ಕಲಾ ಸೇವೆ ಕೂಡ ಭಗವಂತನ ಸೇವೆ. ಹೆಬ್ರಿಯ ಮಂದಿಗೆ ಹೃದಯವಂತಿಕೆ ಇರುವುದರಿಂದ ಮಾತ್ರ ಹೆಬ್ಬೇರಿ ಉತ್ಸವ ಯಶಸ್ವಿಯಾಗಲು ಸಾಧ್ಯವಿದೆ. ಉತ್ಸವದ ಹಿಂದಿನ ಶ್ರಮ ಅದು ಶೇಖರ್ ಅವರಿಗೆ ಗೊತ್ತು. ನಾವೆಲ್ಲ ಸೇರಿ ಹೆಬ್ಬೇರಿ ಉತ್ಸವವನ್ನು ಯಶಸ್ವಿಗೊಳಿಸೋಣ ಎಂದು ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ಪ್ರಸಾದ್ ರಾವ್ ಹೇಳಿದರು.
ಅವರು ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದ ವಠಾರದಲ್ಲಿ ಅನಂತಪದ್ಮನಾಭ ಫ್ರೆಂಡ್ಸ್ ವತಿಯಿಂದ 4ದಿನಗಳ ಕಾಲ ನಡೆದ ಹನ್ನೆರಡನೆಯ ವರ್ಷದ ಹೆಬ್ಬೇರಿ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Advertisement. Scroll to continue reading.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಇಂಡಿಯನ್ ಓವರ್ ಸೀಸ್ ಬ್ಯಾಂಕಿನ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಟಿ ಜಿ ಆಚಾರ್ಯ, ಶಿಕ್ಷಕ, ಸಮಾಜಸೇವಕ ಶಶಿಧರ್ ಶೆಟ್ಟಿ, ಹೆಬ್ರಿ ಭಗತ್ ಸಿಂಗ್ ಯುವ ವೇದಿಕೆಯ ಅಧ್ಯಕ್ಷ ವಿಜಯ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ರೂವಾರಿ ಶೇಖರ್ ಮಾತನಾಡಿ ಉತ್ಸವದ ಯಶಸ್ವಿಗೆ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಉಡುಪಿ ಶಸಸ್ತ್ರ ಮೀಸಲು ಪಡೆಯ ಎಎಸ್ ಪಿ ರಾಘವೇಂದ್ರ, ಹೆಬ್ರಿ ಸಬ್ ಇನ್ಸ್ಪೆಕ್ಟರ್ ಮಹೇಶ್ ಟಿ. ಎಂ, ವಿದ್ಯುತ್ ಗುತ್ತಿಗೆದಾರ ಶ್ರೀನಿವಾಸ್ ಹೆಬ್ಬಾರ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪುಟ್ಟಣ್ಣ ಭಟ್ , ಹೆಬ್ರಿ ಅನಂತಪದ್ಮನಾಭ ಫ್ರೆಂಡ್ಸ್ ನ ಅವಿನಾಶ್ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ. ಶಶಿಧರ್ ಶೆಟ್ಟಿ ವಂದಿಸಿದರು.
Advertisement. Scroll to continue reading.