ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಹಿಜಾಬ್ ವಿವಾದವನ್ನು ಸೃಷ್ಟಿಸಿ ಮುಸ್ಲಿಂ ವಿದ್ಯಾರ್ಥಿಗಳ ಮುಖೇನವಾಗಿ ಶಾಲಾ-ಕಾಲೇಜುಗಳಲ್ಲಿ ಪ್ರತ್ಯೇಕ ವಾದವನ್ನು ನಡೆಸುತ್ತಿರುವ ಹೀನಕೃತ್ಯದ ಹಿಂದೆ ಪಿ ಎಫ್ ಐ-ಎಸ್ ಡಿ ಪಿ ಐ ಮುಸ್ಲಿಂ ಸಂಘಟನೆ ಕೆಲಸ ಮಾಡುತ್ತಿದ್ದು, ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಗೌರವಕ್ಕೆ ಧಕ್ಕೆ ತರುವ ಕೆಲಸಗಳು ನಡೆಯುತ್ತಿದೆ.
ಆ ನಿಟ್ಟಿನಲ್ಲಿ ಹಿಜಾಬ್ ಪ್ರಕರಣಕ್ಕೆ ಮೂಲ ಕಾರಣಕರ್ತರಾದ ಉಡುಪಿಯ ಆರು ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಇದನ್ನು ಬೆಂಬಲಿಸಿ ಸಂಚನ್ನು ರೂಪಿಸಿದವರ ವಿರುದ್ಧ( NIA) ರಾಷ್ಟ್ರೀಯ ತನಿಖಾ ದಳದ ಮುಖಾಂತರವಾಗಿ ಸೂಕ್ತ ತನಿಖೆಯಾಗಬೇಕೆಂದು ವಿಶ್ವ ಹಿಂದೂ ಪರಿಷತ್ – ಬಜರಂಗದಳ ಕುಂದಾಪುರ ಪ್ರಖಂಡ ಮನವಿಯನ್ನು ಮುಖ್ಯಮಂತ್ರಿಗಳಿಗೆ ಕುಂದಾಪುರ ತಹಸೀಲ್ದಾರರ ಮುಖೇನವಾಗಿ ನೀಡಲಾಯಿತು.
Advertisement. Scroll to continue reading.
ವಿಶ್ವ ಹಿಂದೂ ಪರಿಷತ್ ಬಜರಂಗದಳ ಕುಂದಾಪುರ ತಾಲೂಕು ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಬಜರಂಗದಳ ಉಡುಪಿ ಜಿಲ್ಲಾ ಸಂಚಾಲಕರಾದ ಸುರೇಂದ್ರ ಕೋಟೇಶ್ವರ, ಬಜರಂಗದಳ ಕುಂದಾಪುರ ತಾಲೂಕು ಸಂಚಾಲಕರಾದ ಸುಧೀರ್ ಮೆರ್ಡಿ, ತಾಲೂಕು ಕಾರ್ಯದರ್ಶಿಗಳಾದ ಪ್ರದೀಪ್, ಕುಂದಾಪುರ ತಾಲೂಕು ಸಹ ಸಂಚಾಲಕರಾದ ವಸಂತ್ ಸಂಗಮ್, ಕುಂದಾಪುರ ಬಜರಂಗದಳ ಸುರಕ್ಷಾ ಪ್ರಮುಖ್ ಆದ ಗುರುರಾಜ್ ಸಂಗಮ್ ಉಪಸ್ಥಿತರಿದ್ದರು.