ಹಿರಿಯಡ್ಕ : ಅಂಜಾರು ಗ್ರಾಮದ ಪಡುಮನೆಯ ಹತ್ತಿರ ಕಾಡಿನಲ್ಲಿ 3 ಫೀಟ್ ಎತ್ತರ 1:15 ಪೀಟು ಅಗಲವಿರುವ ಗಡಿಕಲ್ಲೊಂದು ಪತ್ತೆಯಾಗಿದೆ. ಈ ಗಡಿಕಲ್ಲಿನಲ್ಲಿರು ವಂತಿರುವ ಶಾಸನ ಸಂಪೂರ್ಣ ಮಣ್ಣಿನಲ್ಲಿ ಮುಚ್ಚಿಹೋಗಿದೆ. ಅದನ್ನು ಸ್ವಚ್ಛಗೊಳಿಸಿದಾಗ ಸೂರ್ಯ ಚಂದ್ರ, ಹಾಗೇನೆ ಛತ್ರಿ ಹಿಡಿದ ವಾಮನ ಮೂರ್ತಿಯಂತೆ ಉಬ್ಬುಇರುವ ಚಿತ್ರದ ಕೆತ್ತನೆಯು ಗೋಚರಿಸದೆ ಎಂದು, ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ತಿಳಿಸಿದ್ದಾರೆ. ಸ್ಥಳೀಯ ನಿವಾಸಿ, ಈಜು ಪಟು ಆತ್ರಾಡಿಯ ದಿನೇಶ್ ಪೂಜಾರಿಯವರ ಮಾಹಿತಿ ಮೇರೆಗೆ ಹಿರಿಯಡ್ಕದ ಅಂಜಾರಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಪೂರ್ಣಿಶ್ ಶೆಟ್ಟಿ, ಸಹಕಾರ ನೀಡಿದ್ದಾರೆ, ಪಕ್ಕದಲ್ಲಿ ಅನತಿದೂರದಲ್ಲಿ ಮೇಲ್ಗಡೆ ಆವರಣವಿಲ್ಲದ ಬಾವಿ ಇದೆ. ಬೊಬ್ಬರ್ಯ ಸ್ಥಾನ, ನಾಗಬ್ರಹ್ಮಸ್ಥಾನದ ಸನ್ನಿಧಿ ಇರುವುದು ಕಂಡುಬಂದಿದೆ.
ಶಿರ್ವದ ಮುಲ್ಕಿ ಸುಂದರಂ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಸಂಶೋಧಕರು, ಪ್ರಾಧ್ಯಾಪಕರಾದ ಪ್ರೋ.ಟಿ ಮುರುಗೇಶಿಯವರಕ ಇದೊಂದು ವಾಮನ ಮುದ್ರೆಯಿರುವ ಗಡಿಕಲ್ಲು ಎಂದು ತಿಳಿಸಿದ್ದಾರೆ.