ಕರಾವಳಿ

ಶಿವಮೊಗ್ಗ ಹರ್ಷ ಹತ್ಯೆ ಪ್ರಕರಣ; ಬ್ರಹ್ಮಾವರದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ ಪ್ರತಿಭಟನೆ

3

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಬ್ರಹ್ಮಾವರ ತಾಲೂಕು ಪ್ರಖಂಡದ ವತಿಯಿಂದ ಶಿವಮೊಗ್ಗದ ಬಜರಂಗ ದಳ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ಖಂಡಿಸಿ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಅಧ್ಯಕ್ಷ ರಾಘವೇಂದ್ರ ಕುಂದರ್ ಜೆಬಿ ಮಾತನಾಡಿ, ಹಿಂದೂ ಸಂಸ್ಕೃತಿ ನಮಗೆ ಹಿಂಸೆಯನ್ನು ಬೋಧಿಸಿಲ್ಲ. ಆದರೆ ನಮ್ಮ ಎಲ್ಲಾ ದೇವರುಗಳು ಅವರ ರಕ್ಷಣೆಗಾಗಿ ಮತ್ತು ದುಷ್ಟರ ಸಂಹಾರಕ್ಕಾಗಿ ಆಯುಧವನ್ನು ಹಿಡಿದಂತೆ ಹಿಂದೂಗಳ ಹತ್ಯೆಗೆ ಪ್ರತಿಕಾರವಾಗಿ ಆಯುಧವನ್ನು ಹಿಡಿಯಲು ತಿಳಿದಿದೆ. ಹತ್ಯೆ ಮಾಡಿದವರು ಯಾರೇ ಆಗಲಿ ಹತ್ಯೆಯನ್ನು ಖಂಡಿಸುತ್ತೇವೆ ಎಂದರು.


ಹಿಂದೂ ಹುಡುಗಿಯರ ಹೆಂಗಸರ ಬಳೆ ಹೂವು, ಕುಂಕುಮದ ಕುರಿತು ಮಾತನಾಡುವ ಮುಸ್ಲಿಂ ಯುವತಿಯರು ಮೊದಲು ಅವರ ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವ ಅವಕಾಶ ಪಡೆಯಲಿ. ಭಾರತಕ್ಕೆ ಅದರದೆ ಆದ ಸಂಸ್ಕೃತಿ ಇದೆ. ಅದನ್ನು ಮುಸ್ಲಿಂಮರಿಂದ ತಿಳಿಯಬೇಕಾಗಿಲ್ಲ. ಅವರವರ ಧರ್ಮ ಆಚರಣೆಗಳು ಅವರ ಮನೆ ಮತ್ತು ಮಂದಿರದಲ್ಲಿ ಮಾಡಿಕೊಳ್ಳಲಿ ಎಂದರು.


ಸಂಘಟನೆಯ ಪ್ರಮುಖರಾದ ಜಯ ಪೂಜಾರಿ, ಶಶಿಕಾಂತ ಕುಂಜಾಲು, ಸಂತೋಷ ಹಂದಾಡಿ, ಭರತ್ ಬಿರ್ತಿ, ರಾಘವೇಂದ್ರ ಕೊಳಂಬೆ, ವಿಕ್ಕಿ ಶೆಟ್ಟಿ, ಕಿರಣ್ ಶೆಟ್ಟಿ ಕುಂಜಾಲು, ಸುಶಾಂತ್ ಚಾಂತಾರು, ಮಹೇಂದ್ರ ನೀಲಾವರ, ರಾಜು ಕುಲಾಲ್, ಶಶಿಧರ್ ಬಿರ್ತಿ, ರಾಘವೇಂದ್ರ, ದೀಪಕ್ ಚಾಂತಾರು, ಉದಯ ಅಗ್ರಹಾರ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com