ಕರಾವಳಿ

ಹೆಬ್ರಿ : ಬಿಸಿ ಕೆಮಿಕಲ್ ಸುರಿದು ಮಾಲೀಕನ ಹತ್ಯೆಗೆ ಯತ್ನ

2

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಕೆಲಸಗಾರ ಬಿಸಿ ಕೆಮಿಕಲ್ ಸುರಿದು ಮಾಲೀಕನ ಹತ್ಯೆಗೆ ಯತ್ನಿಸಿರುವ ಘಟನೆ ಚಾರ ಗ್ರಾಮದ ಮಂಡಾಡಿಜಡ್ಡು ಎಂಬಲ್ಲಿ ನಡೆದಿದೆ. ರತೀಶ ಕೆ.ಟಿ ಆರೋಪಿ. ಕೇರಳದ ತ್ರಿಶೂರ ಜಿಲ್ಲೆಯ ಪುಜಿತರಹ ಹೌಸ್ ಪಾಲಪಿಲ್ಲಿ ಚಿಮ್ಮಣ್ಣ ಎಸ್ಟೇಟ್ ಪುರಂದರ ಪಿಲ್ಲಿಯ ಸುಧಿರ ಪಿ.ಎ. ಹಲ್ಲೆಗೊಳಗಾದವರು.

ಸುಧಿರ ತಮ್ಮ ಕೆಲಸಗಾರ ರತೀಶ.ಕೆ.ಟಿ.ಯೊಂದಿಗೆ ಫೆ.28 ರಂದು ಸಂಜೆ ಚಾರ ಗ್ರಾಮದ ಮಂಡಾಡಿಜಡ್ಡು ಎಂಬಲ್ಲಿರುವ ಅಜಿತ್ ಅಗಸ್ಟಿನ್ ರವರ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಸಜೀಕುಮಾರ ರವರ ಹುಟ್ಟುಹಬ್ಬಕ್ಕೆ ಬಂದಿದ್ದರು.

Advertisement. Scroll to continue reading.

ಅದೇ ದಿನ ರಾತ್ರಿ ಸುಧಿರ ಮತ್ತು ರತೀಶ್.ಕೆ.ಟಿ ರವರು ಜೊತೆಗೆ ಮದ್ಯಪಾನ ಮಾಡಿದ್ದು, ರತೀಶ್.ಕೆ.ಟಿಗೆ ನೀನು ಸರಿಯಾಗಿ ಕೆಲಸ ಮಾಡುವುದಿಲ್ಲ. ಇಲ್ಲಿ ನೋಡು ಅಜಿತ್ ಅಗಸ್ಟಿನ್ ರವರ ಕೆಲಸಗಾರರು ಎಷ್ಟು ಒಳ್ಳೆಯ ರೀತಿಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಾರೆ. ನೀನು ಮುಂದಕ್ಕೆ ಸರಿಯಾಗಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುವಂತೆ ಸುಧಿರ ತಿಳಿಸಿದ್ದಾರೆ. ಈ ವೇಳೆ ನಶೆಯಲ್ಲಿದ್ದ ರತೀಶ್.ಕೆ.ಟಿ ರವರು ನಾನು ಸರಿಯಾಗಿ ಕೆಲಸ ಮಾಡುತ್ತಿದ್ದೇನೆ. ನೀನು ಸುಳ್ಳು ಹೇಳುತ್ತಿಯಾ ಎಂದು ಬೈದಿರುತ್ತಾರೆ. ಆಗ ಅವರಿಬ್ಬರ ಮದ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿ ಅವರಿಬ್ಬರ ನಡುವೆ ಉರುಳಾಟವಾದಾಗ ಸುಧಿರ ಅವರ ಕೈಬೆರಳು ರತೀಶ್.ಕೆ.ಟಿ ರವರ ಎಡಕಣ್ಣಿಗೆ ತಾಗಿರುತ್ತದೆ. ಆಗ ಅಲ್ಲಿದ್ದವರು ಜಗಳವನ್ನು ಬಿಡಿಸಿದ್ದಾರೆ ಎನ್ನಲಾಗಿದೆ.

ಇದೇ ವಿಚಾರದಲ್ಲಿ ರತೀಶ್.ಕೆ.ಟಿ ಮಾರ್ಚ್ 2 ರ ಬೆಳಗಿನ ಜಾವ 1 ಗಂಟೆಗೆ ಸುಧಿರ ಅವರು ಚಾರ ಗ್ರಾಮದ ಮಂಡಾಡಿಜಡ್ಡು ಎಂಬಲ್ಲಿರುವ ಅಜಿತ್ ಅಗಸ್ಟಿನ್ ರವರ ಕೆಲಸದವರು ಮಲಗುವ ಮೆಟ್ಟಿಲು ಬಳಿ ಮಲಗಿರುವಾಗ ಅವರನ್ನು ಕೊಲ್ಲುವ ಉದ್ದೇಶದಿಂದ ಬಿಸಿ ಇರುವ ಕೆಮಿಕಲ್ ನ್ನು  ದೇಹ ಮತ್ತು ಮುಖ ಹಾಗೂ ಎದೆಯ ಮೇಲೆ ಎರಚಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com