ರಾಜ್ಯ

ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆ; ಬಜೆಟ್ ಮುಖ್ಯಾಂಶಗಳು

0

ಬೆಂಗಳೂರು : ಇಂದು 2022-23 ನೇ ಸಾಲಿನ ಬಜೆಟ್ ನ್ನು ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿದರು. 2 ಗಂಟೆ 11ನಿಮಿಷಗಳಷ್ಟು ಸುದೀರ್ಘವಾಗಿ, 2 ಲಕ್ಷದ 65 ಸಾವಿರದ 720 ಕೋಟಿ ಗಾತ್ರದ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು.

  • ಯಂತ್ರೋಪಕರಣಗಳ ಖರೀದಿಗೆ ರೈತ ಶಕ್ತಿ ಯೋಜನೆ ಘೋಷಣೆ
  • ರೈತ ಶಕ್ತಿ ಯೋಜನೆಗೆ 500 ಕೋಟಿ ಮೀಸಲು
  • ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸ್ಥಾಪಿಸಲು 50 ಕೋ.ನಿಗದಿ
  • ಎಕರೆಗೆ 250 ರೂ.ನಂತೆ ಗರಿಷ್ಠ 5
  • ರೈತರ ಆದಾಯ ಹೆಚ್ಚಿಸಲು ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ
  • ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮಿನಿ ಆಹಾರ ಪಾರ್ಕ್
  • ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಲ್ಲಿ ಕೃಷಿ ಕಾಲೇಜು ಸ್ಥಾಪನೆ
  • ಮೇಕೆದಾಟು ಯೋಜನೆಗೆ 1000ಕೋಟಿ ರೂ.
  • ಎತ್ತಿನಹೊಳೆ ಯೋಜನೆಗೆ 3 ಸಾ.ಕೋಟಿ.
  • ಕೃಷ್ಣ ಮೇಲ್ದಂಡೆ
  • ಹಾವೇರಿಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ
  • ಬೆಂಗಳೂರು ಅಭಿವೃದ್ಧಿಗೆ 8,409 ಕೋಟಿ ಮೀಸಲು
  • ಮರಾಠ ಅಭಿವೃದ್ಧಿಗೆ 50 ಕೋ.,ವೀರ ಶೈವ ಲಿಂಗಾಯತ, ಒಕ್ಕಲಿಗ ಅಭಿವೃದ್ಧಿಗೆ 100 ಕೋ.,ಕೊಡವ ಜನಾಂಗ ಅಭಿವೃದ್ಧಿಗೆ 10 ಕೋ., ಕ್ರಿಶ್ಚಿಯನ್, ಜೈನ, ಬೌದ್ಧ ,ಸಿಖ್, ಅಭಿವೃದ್ಧಿಗೆ 50 ಕೋ.
  • ನಾರಾಯಣ ಗುರು ಸ್ಮರಣಾರ್ಥ ಉಡುಪಿ, ಮಂಗಳೂರು, ಶಿವಮೊಗ್ಗದಲ್ಲಿ ನಾರಾಯಣಗುರು ವಸತಿ ಶಾಲೆ
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಮಕ್ಕಳಿಗೆ ಇಂಗ್ಲೀಷ್ ಕಲಿಯಲು 5 ಕೋ.
  • ಪುಣ್ಯಕ್ಷೇತ್ರಗಳಿಗೆ ಹೋಗುವ ಯಾತ್ರಾರ್ಥಿಗಳಿಗೆ
  • 30,000 ಕಾಶಿ ಯಾತ್ರಿಗಳಿಗೆ, 5000
  • ಪುಣ್ಯಕೋಟಿ ದತ್ತು ಯೋಜನೆ
  • ಕೆ ಎಂ ಎಫ್ ಮೂಲಕ ಸ್ಥಳೀಯ ಗೋವು ತಳಿ ವಿತರಣೆ
  • ಗೋಮಾತಾ ಸರ್ಕಾರಿ ಸಂಘ ಸ್ಥಾಪನೆ
  • ಮತ್ಸ್ಯಸಿರಿ ಯೋಜನೆ ಜಾರಿ
  • ಕಡಲ್ಕೊರೆತ ತಡೆಗಟ್ಟಲು ಹೊಸಕ್ರಮ
  • ಪೆಟ್ರೋಲ್,ಡಿಸೇಲ್ ಮೇಲಿನ ರಾಜ್ಯ ಸುಂಕ ಏರಿಕೆ ಇಲ್ಲ
  • ಸಿನಿಮಾ ಸಬ್ಸಿಡಿ 125 ರಿಂದ 200 ಕನ್ನಡ ಚಿತ್ರಗಳಿಗೆ ಏರಿಕೆ
  • ಆಶಾ ಕಾರ್ಯಕರ್ತರಿಗೆ ಗೌರವ ಧನ ಹೆಚ್ಚಳ. ಬಿಸಿಯೂಟ ತಯಾರಿಕರಿಗೆ 1000 ರೂ.ಹೆಚ್ಚಳ. ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ದಿಂದ 1,5000 ಕ್ಕೆ ಗೌರವ ಧನ ಹೆಚ್ಚಳ
  • ಕೊಪ್ಪಳದ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಮಾಡಲಾಗುತ್ತದೆ
  • ಜೋಗ ಜಲಪಾತದಲ್ಲಿ 116 ಕೋ.ರೂ.ವೆಚ್ಚದಲ್ಲಿ ಹೊಟೇಲ್ ಹಾಗೂ ರೋಪ್ ವೇ ಅಭಿವೃದ್ಧಿ
  • ನಂದಿ ಬೆಟ್ಟದಲ್ಲಿ 93 ಕೋ.ರೂ. ವೆಚ್ಚದಲ್ಲಿ ರೋಪ್ ವೇ
  • ಬೆಂಗಳೂರಿಗೆ ಜ್ಯುವೆಲ್ಲರಿ ಪಾರ್ಕ್
  • ವಿಧವಾ ವೇತನಾ 200 ರೂ.ಹೆಚ್ಚಳ
  • ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಪತ್ಯೇಕ
  • ಹುಬ್ಬಳ್ಳಿ ಜಯದೇವ ಆಸ್ಪತ್ರೆ, ಬೆಳಗಾವಿಯಲ್ಲಿ ಕಿದ್ವಾಯಿ ಆಸ್ಪತ್ರೆ
  • ಬೆಂಗಳೂರು ನಗರದ ನಾಲ್ಕು ಭಾಗದಲ್ಲಿ 500 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತದೆ
  • ಬಾಗಲಕೋಟೆಯಲ್ಲಿ 7 ವಿವಿ ಸ್ಥಾಪನೆ
  • ರಾಜ್ಯಾದ್ಯಂತ ಡಿಜಿಟಲ್‌ ಗ್ರಂಥಾಲಯ
  • ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಮೀನುಗಾರಿಕಾ ಬಂದರು ಸ್ಥಾಪನೆ, ಬೈಂದೂರು, ಮಲ್ಪೆ ಬಂದರು ನಿರ್ಮಾಣ, ಪ್ರಧಾನಮಂತ್ರಿ ಮತ್ಸ್ಯ ಸಂಒದ ಯೋಜನೆಯಡಿ 250 ಕೋ.ಮೀಸಲು
  • ಉತ್ತರಕನ್ನಡದ ಕೇಣಿ – ಬೇಣಿಕೇರಿಯಲ್ಲಿ ಗ್ರೀನ್ ಫಿಲ್ಡ್ ಬಂದರು
  • ರಾಜ್ಯದಲ್ಲಿ ಕೇಂದ್ರದ ಸಹಕಾರದೊಂದಿಗೆ ರೈಲು ಮಾರ್ಗ
  • 20 ನೂತನ ರೈಲ್ವೆ, ಮೇಲ್ಸೇತುವೆ ಸ್ಥಾಪನೆ
  • ಸರ್ವರಿಗೂ ಸೂರು ಯೋಜನೆಯಡಿ 5 ಲಕ್ಷ ಹೊಸ ಮನೆ ನಿರ್ಮಾಣಕ್ಕೆ 6,612 ಕೋ.
  • ವೈದ್ಯಕೀಯ ಸೌಲಭ್ಯ ನೀಡುವ ಯಶಸ್ವಿನಿ ಯೋಜನೆ ಮತ್ತೆ ಜಾರಿ
  • ರೈತ ಮಹಿಳೆಯರಿಗೆ 5 ಲಕ್ಷ ಕೋಳಿ ಮರಿ ವಿತರಣೆಗೆ ಕ್ರಮ
  • ಶ್ರೀಮತಿ ಸಾವಿತ್ರಿ ಬಾಯಿ ಫುಲೆ ಹೆಸರಿನಲ್ಲಿ ಪ್ರತಿವರ್ಷ ರಾಜ್ಯ ಮಟ್ಟದ ಆದರ್ಶ ಶಿಕ್ಷಕ/ಶಿಕ್ಷಕಿ ಪ್ರಶಸ್ತಿ
  • ದೇವಾಲಯಗಳಿಗೆ ಸ್ವಯತ್ತತೆ
  • ಯಲಹಂಕದಲ್ಲಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ
  • ಕೊಲ್ಲೂರು, ಧರ್ಮಸ್ಥಳ, ತಿರುಪತಿ, ಮಂತ್ರಾಲಯಕ್ಕೆ ಪ್ಯಾಕೇಜ್ ಟ್ರಿಪ್ ಸೇವೆ
  • ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು 20 ಕೋ.ಅನುದಾನ, ರಾಜ್ಯಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ ಆಯೋಜನೆ, ಕಾಸರಗೋಡು, ಅಕ್ಕಲಕೋಟೆ, ಗೋವಾದಲ್ಲಿ ಕನ್ನಡ ಭವನ ನಿರ್ಮಾಣ
  • ಸಾಹಿತಿಗಳಾದ ಡಾ.ಸಿದ್ಧಲಿಂಗಯ್ಯ, ಡಾ.ಎಂ.ಚಿದಾನಂದಮೂರ್ತಿ,ಚನ್ನವೀರ ಕಣವಿ, ಡಾ.ಚಂದ್ರಶೇಖರ ಪಾಟೀಲ್ ಸಾಹಿತ್ಯ ಪ್ರಚಾರಕ್ಕೆ ಕ್ರಮ
  • ರಾಜ್ಯದಲ್ಲಿ ರೇಷ್ಮೆ ಬೆಳೆಗಾರರಿಗೆ ಅತ್ಯಾಧುನಿಕ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಕಲಬುರಗಿ ಮತ್ತು ಹಾವೇರಿ ಜಿಲ್ಲೆಯಲ್ಲಿ ನಬಾರ್ಡ್ ನೆರವಿನೊಂದಿಗೆ 30 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತದೆ.
  • ರೇಷ್ಮೆ ಬೆಳೆಗಾರರ ಆದಾಯವನ್ನು ಹೆಚ್ಚಿಸಲು ದ್ವಿತಳಿ ಬಿತ್ತನೆ ಗೂಡಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಪ್ರತಿ ಕೆಜಿಗೆ 50 ರೂ.ಗಳಷ್ಟು ಹೆಚ್ಚಿಸಲಾಗುತ್ತದೆ.
  • ಮಂಡ್ಯದ ಕೆ. ಆರ್. ಪೇಟೆಯಲ್ಲಿ ರೇಷ್ಮೆ ಎಲ್ಲಾ ಉತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಕೇಂದ್ರವನ್ನು ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ ಮಾಡಲಾಗುತ್ತದೆ.
  • ಚಿಕ್ಕಮಗಳೂರು, ಹಂಪಿ ಹೆಲಿಪೋರ್ಟ್ ನಿರ್ಮಾಣ
  • ಕರಾವಳಿಯಲ್ಲಿ ಬ್ಲೂ ಪ್ಲಾಸ್ಟಿಕ್ ನಿರ್ವಹಣಾ ಯೋಜನೆ
  • ಹಾಸನ, ಚಿಕ್ಕಮಗಳೂರಿನಲ್ಲಿ ಆನೆ ಹಾವಳಿ ತಡೆಗಟ್ಟಲು ಕ್ರಮ
  • ಪ್ರಮುಖ ನಗರಗಳಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪನೆ, ದೆಹಲಿ ಮಾದರಿಯಲ್ಲಿ ಮೊಹಲ್ಲಾ ಕ್ಲಿನಿಕ್ ಸ್ಥಾಪನೆ
  • ಆಸಿಡ್ ಸಂತ್ರಸ್ಥೆಯರಿಗೆ 10000 ರೂ.ಮಾಸಾಶನ
  • ಕಟ್ಟಡ ಕಾರ್ಮಿಕರಿಗೆ ಹೈಟೆಕ್ ಸಂಚಾರಿ ಕ್ಲಿನಿಕ್
  • ಬಿಪಿಎಲ್ ಕಾರ್ಡ್ ದಾರರಿಗೆ 1 ಕೆಜಿ ಹೆಚ್ಚುವರಿ ರಾಗಿ/ಜೋಳ
  • ರಾಮನಗರದ ಅರ್ಚಕರಹಳ್ಳಿಯಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆರಂಭಿಸಲಾಗುತ್ತದೆ. ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com